ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 41
ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ಇಂದಿನ ನಾಮಾವಳಿಗಳು :
212 . ಓಂ ಶ್ಲಿಷ್ಟಜಾನವೇ ನಮಃ
213 . ಓಂ ಸ್ಥೂಲೋರವೇ ನಮಃ
214 . ಓಂ ಪ್ರೋನ್ನಮತ್ಕಟಯೇ ನಮಃ
215 . ಓಂ ನಿಮ್ನನಾಭಯೇ ನಮಃ
211. ಓಂ ಶ್ಲಿಷ್ಟಜಾನುಃ-
ಭಾ: ಜಂಘೋರು ಸಂಧಿಯುಗ್ಮಂ ಚೇದಸ್ಪಷ್ಟಂ ಶ್ಲಿಷ್ಟಜಾನುಕಃ ।
ಮಂಡಿಯು, ತೊಡೆಗಳ ಸಂಧಿ ಭಾಗವು ಕಾಣಿಸದೇ ಇದ್ದರೆ ಅಥವಾ ಸಮಾನವಾಗಿದ್ದರೆ ಅವನು ಶ್ಲಿಷ್ಟಜಾನುವು ಎಂದೆನಿಸಿಕೊಳ್ಳುತ್ತಾನೆ. (ಅನಾರೋಗ್ಯದಿಂದ ನೀರಸವಾಗಿ ಇರುವವರ ಮಂಡಿಯ ಚಿಪ್ಪು ಕೊಬ್ಬರಿಚಿಪ್ಪಿನ ಹಾಗೆ ಹೊರಗೆಬಂದು ಕಾಣಿಸುತ್ತಿರುತ್ತದೆ. ಹಾಗೆ ಕಾಣಿಸುವುದು ಒಳ್ಳೆಯ ಲಕ್ಷಣವಲ್ಲ.)
ಓಂ ಶ್ಲಿಷ್ಟಜಾನವೇ ನಮಃ
212. ಓಂ ಸ್ಥೂಲೋರುಃ-
ಭಾ: ಸ್ಥೂಲೋರುರೂರುಯುಗಲಂ ಸ್ಥೂಲಂ ವೈ ಯಸ್ಯ ಸ ಸ್ಮೃತಃ ।
ಬಲವಾದ ತೊಡೆಗಳು ಇರುವವನಾದ್ದರಿಂದ ಗಣೇಶನು ಸ್ಥೂಲೋರುವು.
ಓಂ ಸ್ಥೂಲೋರವೇ ನಮಃ
213. ಓಂ ಪ್ರೋನ್ನಮತ್ಕಟಿಃ-
ಭಾ: (ಆ) ನಮ್ರೋನ್ನಮತ್ಕಟಿರ್ಯಸ್ಯ ಸ ಪ್ರೋಕ್ತಃ ಪ್ರೋನ್ನಮತ್ಕಟಿಃ ।
ಉನ್ನತವಾದ ಕಟಿಪ್ರದೇಶ(ಸೊಂಟದ ಭಾಗ) ಇರುವವನಾದ್ದರಿಂದ ಪ್ರೋನ್ನಮತ್ಕಟಿಯು.
ಓಂ ಪ್ರೋನ್ನಮತ್ಕಟಯೇ ನಮಃ
ನಿಮ್ನನಾಭಿಃ ಸ್ಥೂಲಕುಕ್ಷಿಃ ಪೀನವಕ್ಷಾ ಬೃಹದ್ಭುಜಃ
ಪೀನಸ್ಕಂಧಃ ಕಂಬುಕಂಠಃ ಲಂಬೋಷ್ಠೋ ಲಂಬನಾಸಿಕಃ
214. ಓಂ ನಿಮ್ನನಾಭಿಃ-
ಭಾ: ಗಾಂಭೀರ್ಯತೋ ನಿಮ್ನನಾಭಿಃ………………..
ಆಳವಾದ ಹೊಕ್ಕಳು ಇರುವುದರಿಂದ ಅವನು ನಿಮ್ನನಾಭಿಯು.
ಓಂ ನಿಮ್ನನಾಭಯೇ ನಮಃ
215. ಓಂ ಸ್ಥೂಲಕುಕ್ಷಿಃ-
ಭಾ: ………………ಸ್ಥೂಲಕುಕ್ಷಿಃ ಪಿಚಂಡಿಲಃ ।
ದೊಡ್ಡಹೊಟ್ಟೆ ಉಳ್ಳವನಾದ್ದರಿಂದ ಗಣೇಶನು ಸ್ಥೂಲಕುಕ್ಷಿ.
ಓಂ ಸ್ಥೂಲಕುಕ್ಷಯೇ ನಮಃ
( ಮುಂದುವರೆಯುವುದು )
( ಸಂಗ್ರಹ )
* ಭಾಲರಾ
ಬೆಂಗಳೂರು