ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 84
ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ಇಂದಿನ ನಾಮಾವಳಿಗಳು :
429 . ಓಂ ಓಷಧೀಪತಯೇ ನಮಃ
430 . ಓಂ ಔದಾರ್ಯನಿಧಯೇ ನಮಃ
431 . ಓಂ ಔದ್ಧತ್ಯಧುರ್ಯಾಯ ನಮಃ
432 . ಓಂ ಔದ್ಧತ್ಯಧುರ್ಯಾಯ ನಮಃ
433 . ಓಂ ಸುರನಾಗಾನಾಮಂಕುಶಾಯ ನಮಃ
429. ಓಂ ಓಷಧೀಪತೆ : –
ಭಾ: ಓಷಧೀಪತಿರೌದಾರ್ಯನಿಧಿರಿತ್ಯಾಹ್ವಯೌ ಸ್ಫುಟೌ
ಓಷಧಿಗಳಿಗೆ ಪ್ರಭುವಾದ್ದರಿಂದ ಅವನು ಓಷಧೀಪತಿಯು.
ಓಂ ಓಷಧೀಪತಯೇ ನಮಃ
430. ಓಂ ಔದಾರ್ಯನಿಧಿಃ-
ದಾನಿಯನ್ನೂ, ತ್ಯಾಗಶೀಲಿಯನ್ನೂ, ದಯಾಳುವನ್ನೂ, ಮೃದುಹೃದಯನನ್ನೂ, ಉದಾರ ಎನ್ನುತ್ತಾರೆ. ಉದಾರನ ಭಾವವೇ ಔದಾರ್ಯ. ಔದಾರ್ಯಕ್ಕೆ ನಿಧಿಯಾದ್ದರಿಂದ ಗಣೇಶನು ಔದಾರ್ಯನಿಧಿಯು.
ಓಂ ಔದಾರ್ಯನಿಧಯೇ ನಮಃ
431. ಓಂ ಔದ್ಧತ್ಯಧುರ್ಯಃ-
ಭಾ: ಔದ್ಧತ್ಯಮುದ್ಧತತ್ತ್ವಂ ಯತ್ ಸ್ವಭಕ್ತಾನುಜಿಘೃಕ್ಷಯಾ
ಸ್ವೋತ್ಕರ್ಷದ್ಯೋತನಂ ತತ್ರ ಶ್ರೇಷ್ಠ ಔದ್ಧತ್ಯಧುರ್ಯಕಃ
ಭಕ್ತರನ್ನು ಅನುಗ್ರಹಿಸುವ ವಿಷಯದಲ್ಲಿ ತಮ್ಮ ದೊಡ್ಡತನವನ್ನು ಪ್ರಕಾಶಿಸುವವರಲ್ಲಿ ಶ್ರೇಷ್ಠನಾದ್ದರಿಂದ ಅವನು ಔದ್ಧತ್ಯಧುರ್ಯನು.
ಓಂ ಔದ್ಧತ್ಯಧುರ್ಯಾಯ ನಮಃ
432. ಓಂ ಔನ್ನತ್ಯನಿಸ್ವನಃ-
ಭಾ: ಬೃಂಹಿತಂ ಯಸ್ಯ ಸರ್ವೋಚ್ಛಂ ಸ ಸ್ಯಾದೌನ್ನತ್ಯನಿಸ್ವನಃ
ಎಲ್ಲಾ ಶಬ್ದಗಳಿಗಿಂತಲೂ ಜೋರಾದ ಘೀಂಕಾರವನ್ನು ಮಾಡುತ್ತಿರುವವನಾದ್ದರಿಂದ ಅವನು ಔನ್ನತ್ಯನಿಸ್ವನನು.
ಓಂ ಔನ್ನತ್ಯನಿಸ್ವನಾಯ ನಮಃ
ಅಂಕುಶಸ್ಸುರನಾಗಾನಾಮಂಕುಶ ಸ್ಸುರವಿದ್ವಿಷಾಮ್
ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಃ
433. ಓಂ ಸುರನಾಗಾನಾಮಂಕುಶಃ –
ಭಾ: ಅಂಕುಶಸ್ಸುರನಾಗಾನಾಂ ತ್ರೈಲೋಕ್ಯಸ್ಯ ನಿಯಾಮಕಃ
ಊರ್ಧ್ವಂ ಸುರಾ ಅಧೋ ನಾಗಾ ಮರ್ತ್ಯಲೋಕೋಪಲಕ್ಷಣಮ್
ಮೂರು ಲೋಕಗಳ ನಿಯಾಮಕನಾದ್ದರಿಂದ ಅವನು ಸುರನಾಗಾನಾಮಂಕುಶನು. ಸುರಶಬ್ದವು ಊರ್ಧ್ವಲೋಕಗಳಲ್ಲಿರುವ ದೇವತೆಗಳನ್ನೂ, ನಾಗಶಬ್ದವು ಭೂಮಿಯ ಕೆಳಗಿರುವ ಪಾತಾಳಾದಿ ಲೋಕಗಳನ್ನು ಅಥವಾ ಅಷ್ಟದಿಗ್ಗಜಗಳನ್ನೂ ಹೇಳುತ್ತದೆ. ಆದ್ದರಿಂದ ಸುರನಾಗಶಬ್ದವು ಭೂಲೋಕಕ್ಕೆ ಉಪಲಕ್ಷಣವು. ಹಾಗಾಗಿ ಗಣೇಶನು ಭೂಮಿಯ ನಿಯಾಮಕನೆಂದು ತಿಳಿಯಬೇಕು.
ಓಂ ಸುರನಾಗಾನಾಮಂಕುಶಾಯ ನಮಃ
( ಮುಂದುವರೆಯುವುದು )
( ಸಂಗ್ರಹ )
* ಭಾಲರಾ
ಬೆಂಗಳೂರು