MP : 10/10/2021 ರ ದಸರ ಸಾಂಸ್ಕೃತಿಕ ಕಾರ್ಯಕ್ರಮ : ಗಾನಸಿರಿ

665
Share

 

ಸರ್ವಜ್ಞೆ ಸರ್ವವರದೆ ಸರ್ವದುಷ್ಟ ಭಯಂಕರಿ ।
ಸರ್ವ ದುಃಖಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೆ ॥
ಓಂ ಶ್ರೀ ದೇವಿ ಸ್ವರೂಪ ಮೀನಾಕ್ಷಿ ದೇವ್ಯೈ ನಮಃ
ನವರಾತ್ರಿಯ ನಾಲ್ಕನೆ ದಿನವಾದ ಇಂದು ಮೈಸೂರು ಪತ್ರಿಕೆಯ ದಸರಾ ವಿಶೇಷ ಗಾನಸಿರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯರಾದ ಶ್ರೀಮತಿ . ರುಕ್ಮಿಣಿ ರಾಮಶಾಸ್ತ್ರಿಯವರು ನಡೆಸಿಕೊಡಲಿದ್ದಾರೆ. ಮೂಲತಃ ಮೇಲುಕೋಟೆ ನಿವಾಸಿಯಾದ ರುಕ್ಮಿಣಿ ರಾಮಶಾಸ್ತ್ರಿಯವರು 40 ವರ್ಷಗಳ ಹಿಂದೆ ಮುನಿಸಿಪಲ್ ಕೌನ್ಸಿಲ್ ನಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಹಾಗೂ ನುರಿತ ಈಜುಗಾರ್ತಿ ಆಗಿದ್ದರು . ಒಮ್ಮೆ ಮೇಲುಕೋಟೆಯಲ್ಲಿ ಕೊಳದಲ್ಲಿ ನೀರು ಪಾಲಾಗಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಜೀವದಾನವನ್ನೂ ನೀಡಿದ್ದಾರೆ .
ಇವರ ಎಲ್ಲ ಪ್ರತಿಭೆಗಳನ್ನು ಗುರುತಿಸಿ ಮಹಿಳೆಯರನ್ನು ಸಮಾನವಾಗಿ ಕಾಣಬೇಕು ಎಂಬ ಆದರ್ಶ ಹೊಂದಿದ್ದರು ಶ್ರೀಮತಿ ರುಕ್ಮಿಣಿ ರಾಮಶಾಸ್ತ್ರಿಯವರ ಪತಿ ದಿವಂಗತ ರಾಮಶಾಸ್ತ್ರಿಯವರು .
ಹುರಿಯಾರಾದ ಶ್ರೀಮತಿ ರುಕ್ಮಿಣಿ ರಾಮಶಾಸ್ತ್ರಿಯವರನ್ನು ಮೈಸೂರು ಪತ್ರಿಕೆ ತಂಡವು ಗೌರವ ಆದರದಿಂದ ಸ್ವಾಗತ ಕೋರುತ್ತದೆ .


Share