ಅಪೇಕ್ಷೆ ಇಲ್ಲದ ಜೀವವೆಂದರೆ ತಾಯಿ ಮಾತ್ರ

282
Share

 

*ಅಪೇಕ್ಷೆ ಇಲ್ಲದ ಜೀವವೆಂದರೆ ತಾಯಿ ಮಾತ್ರ… ಸವಿತ ಗೌಡ*

ಮೈಸೂರು ಸಮಾಜದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷನ ಸಮನಾಗಿ ಮಹಿಳೆ ದುಡಿಯುತ್ತಿದ್ದಾಳೆ ಏನನ್ನು ಅಪೇಕ್ಷಿಸದೆ ಕುಟುಂಬದ ನಿರ್ವಹಣೆ ಮಾಡುವ ಜೀವವೆಂದರೆ ತಾಯಿ ಮಾತ್ರ ಎಂದು ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ಗೌಡ್ತಿಯರ ಬಳಗದ ಅಧ್ಯಕ್ಷರಾದ ಸವಿತಾ ಗೌಡ ಹೇಳಿದರು. ಕುವೆಂಪು ನಗರದಲ್ಲಿರುವ ನೇಗಿಲಯೋಗಿ ಸಭಾಂಗಣದಲ್ಲಿ ಆದಿಚುಂಚನಗಿರಿಯ ಮಹಿಳಾ ಒಕ್ಕಲಿಗ ಸಮಾಜದ ಗೌಡತಿಯರ ಬಳಗ ಹಾಗೂ ಒಕ್ಕಲಿಗರ ಸೇವಾ ವೇದಿಕೆಯ ಸಹಾಯಕದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಮ್ಮದೇ ಸಮಾಜದ ಮಹಿಳಾ ಸಾಧಕೀಯರನ್ನು ಸನ್ಮಾನಿಸುವ ಮೂಲಕ ಆಚರಣೆ ಮಾಡಲಾಯಿತು ಆ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಂದಿರಮ್ಮ ಹಾಗೂ ವೈದ್ಯಾಧಿಕಾರಿ ಪ್ರಮೀಳಾ ಅವರನ್ನು ಸನ್ಮಾನಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಆ ಬಳಿಕ ಮಾತನಾಡಿದ ಅವರು ಮಹಿಳೆಯರು ಕುಟುಂಬಕ್ಕೆ ಕಪ್ಪು ಚುಕ್ಕಿ ಬರದಂತೆ ಸಮಾಜದಲ್ಲಿ ನಡೆಯಬೇಕಾಗುತ್ತದೆ. ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಎಲ್ಲರ ಸಂತೋಷವನ್ನು ಬಯಸುತ್ತಾರೆ ಎಂದರು. ಈ ಕಾರ್ಯಕ್ರಮವನ್ನು ಅಧ್ಯಕ್ಷರಾದ ಸವಿತಾ ಗೌಡ ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ್ ಲತಾ ರಮೇಶ್ ಮಮತಾ ಪುರುಷೋತ್ತಮ್ ಸುಧಾ ಸ್ವಾಮಿಗೌಡ. ಜಾನ್ಹವಿ. ವಿಜಯ ಮಂಜುನಾಥ್. ರಾಣಿ ಮಹೇಶ್ ಇಂದಿರಾ ಹಾಗೂ ಬಳಗದ ಸದಸ್ಯರು ಹಾಗೂ ವಿ ಎಸ್ ವಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share