ಉಕ್ರೇನ್ ಯುದ್ಧ : ಕರ್ನಾಟಕದ ವಿದ್ತಾರ್ಥಿ ಬಲಿ

411
Share

ಉಕ್ರೇನಿನ ಖಾರ್ಕೀವ್ ವಿಶ್ವವಿದ್ಯಾನಿಲಯದಲ್ಲಿ ಮೆಡಿಸನ್ ಓದುತ್ತಿದ್ದ ನಾಲ್ಕನೇ ವರ್ಷದ ವಿದ್ಯಾರ್ಥಿ ಕರ್ನಾಟಕದ ಹಾವೇರಿ ಜಿಲ್ಲೆ ಚಳಗೇರಿ ಮೂಲದ ನವೀನ್ ಶೇಖರಪ್ಪ ಎಂಬ ವಿದ್ಯಾರ್ಥಿ ಇಂದು ಉಕ್ರೇನಿನ ಯುದ್ಧಭೂಮಿಯಲ್ಲಿ ರಷ್ಯಾ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ ಎಂದು ಹೇಳಲಾಗಿದೆ.
ಬೆಕೆಟೊವಾ ಮೆಟ್ರೋ ರೈಲ್ವೇ ಸ್ಟೇಷನ್ ಬಳಿಯ ಸೂಪರ್ ಮಾರ್ಕೆಟ್ಟಿನಲ್ಲಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ನವೀನ್ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ವಿದೇಶಾಂಗ ಇಲಾಖೆ ವಕ್ತಾರ ಅರವಿಂದಂ ಟ್ವೀಟ್ ಮೂಲಕ ನವೀನ್ ದುರ್ಮರಣವನ್ನು ಖಚಿತಪಡಿಸಿದ್ದು ಸಂತಾಪ ಸೂಚಿಸಿದ್ದಾರೆ.


Share