ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸುದ್ದಿಗಳನ್ನು ಹಾಗೂ ವಿಚಾರಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕುತೂಹಲಿ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನವದೆಹಲಿಯ ವಿಜ್ಞಾನ ಪ್ರಸಾರ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗಳು ಜಂಟಿಯಾಗಿ ನಡೆಸುತ್ತಿರುವ ಈ ಯೋಜನೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಹೊಸ ವಿಜ್ಞಾನ ಪುಸ್ತಕಗಳು, ವಿಜ್ಞಾನ ವೀಡಿಯೋ, ಪಾಡ್ ಕಾಸ್ಟ್ ಹಾಗೂ ಸುದ್ದಿಪತ್ರಗಳನ್ನು ಪ್ರಕಟಿಸುವ ಉದ್ದೇಶವಿದೆ. ಇವೆಲ್ಲವುಗಳ ಜೊತೆಗೇ ಪ್ರತಿ ವಾರವೂ ಪ್ರಸ್ತುವ ವಿಷಯ ಕುರಿತ ವಿಜ್ಞಾನ ಗೋಷ್ಠಿಗಳನ್ನೂ ಆಯೋಜಿಸುತ್ತಿದ್ದೇವೆ. ಇವುಗಳಲ್ಲಿ ಮೂರನೆಯ ಜಾಲಗೋಷ್ಟಿಯನ್ನು ಇದೇ ಶುಕ್ರವಾರ ಸಂಜೆ ೭.೦೦ ಗಂಟೆಗೆ ಆಯೋಜಿಸಲಾಗಿದೆ.