ಕರೋನ -ಯುವತಿಯ ಏಕಾಂಗಿ ಪ್ರತಿಭಟನೆSMILE ಅನ್ನುವವರ ಮುಖದಲ್ಲಿ ನಗು ತರುವ ಕೆಲಸವನ್ನು ಸರ್ಕಾರ ಮಾಡಲಿ

601
Share

 

 

ಸ್ವಾತಂತ್ರ್ಯ ಹೋರಾಟಗಾರ ಉದ್ಯಾನವ ದಲ್ಲಿ ಏಕಾಂಗಿ ಪ್ರತಿಭಟನೆ…ಗಾಂಧಿ ಪ್ರತಿಮೆ ಮುಂಭಾಗ SMILE ಅನ್ನುವವರ ಮುಖದಲ್ಲಿ ನಗು ತರುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಭಿತ್ತಿಪತ್ರ ಹಿಡಿದು ಛಾಯಾಗ್ರಾಹಕಿ ಅಂಜಲಿಯಿಂದ ಏಕಾಂಗಿ ಹೋರಾಟ ನಡೆಸಿದರು
ನಂತರ ಮಾಧ್ಯಮಗಳು ಜೊತೆ ಮಾತನಾಡಿ
ಕೋವಿಡ್‌ ಹಾಗೂ ನೆರೆ ಸಂತ್ರಸ್ತ ವೃತ್ತಿ ಬಾಂಧವರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕಇಲಾಖೆ ವಿವಿಧ ಯೋಜನೆ ಒದಗಿಸಬೇಕು. ಛಾಯಾಗ್ರಾಹಕರಿಗೆ ಕಾರ್ಮಿಕ ಸ್ಮಾರ್ಟ್‌ ಕಾರ್ಡ್‌ ನೀಡಬೇಕು. 151 ವರ್ಷದ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು.
ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ವೆಬ್‌ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆಯುವುದು ನಿಷೇಧಿಸಿ, ವೃತ್ತಪರ ಛಾಯಾಗ್ರಾಹಕರಿಗೆ ನೀಡುವುದು .
ವರ್ಷದ 6 ತಿಂಗಳು ಮದುವೆ, ನಾಮಕರಣ, ಪ್ರಿವೆಡ್ಡಿಂಗ್ ಹೀಗೆ ಹಲವಾರು ಸುಸಂದರ್ಭಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳ ಮೇಲೆ ಲಾಕ್​ಡೌನ್​​ ಎಫೆಕ್ಟ್​​ ತಟ್ಟಿದ್ದು, ಇದಕ್ಕೆ.‌ ಏಕಾಏಕಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಮದುವೆ ಹಾಗೂ ಶುಭ ಸಮಾರಂಭಗಳೆಲ್ಲವೂ ರದ್ದಾಗಿವೆ.‌ ಇದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದ ಪರಿಣಾಮ‌ ವ್ಯವಹಾರವೂ ಇಲ್ಲದೆ 2000ಕ್ಕೂ ಹೆಚ್ಚು ಛಾಯಾಗ್ರಾಹಕರ ಕುಟುಂಬಗಳು ಪ್ರತಿನಿತ್ಯ ಪರದಾಡುವಂತಾಗಿದೆ.
ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಪಾಡಂತೂ ಹೇಳತೀರದ್ದಾಗಿದೆ. ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ಧಾರೆ. ತೀರಾ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ.
.ಛಾಯಾಗ್ರಾಹಕ ಸಂಕಷ್ಟಕ್ಕೆ ಸರ್ಕಾರ ಪ್ಯಾಕೇಜ್ ಘೋಷಿಸಲಿ.ಕಳೆದ ಬಾರಿ ಕೂಡ ಸರ್ಕಾರದಿಂದ ಯಾವುದೇ ಸಹಾಯ ಬಂದಿಲ್ಲ.ಛಾಯಾಗ್ರಾಹಕ ರು ತೀವ್ರ ಸಂಕಷ್ಟ ದಲ್ಲಿ ಇದ್ದಾರೆ..ಇನ್ನಾದರೂ ಸರ್ಕಾರ ಸಹಾಯ ಹಸ್ತ ನೀಡಲಿ ಎಂದು ಮಹಿಳಾ ಛಾಯಗ್ರಾಹಕಿ ಅಂಜಲಿ ಒತ್ತಾಯಿಸಿದರು


Share