ಹೊಸದಿಲ್ಲಿ: 75ನೇ ಗಣರಾಜ್ಯೋತ್ಸವ ಪಥಸಂಚಲನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರ್ತವ್ಯ ಪಥದಲ್ಲಿ ಆವರಣದಲ್ಲಿರುವ ಪ್ರೇಕ್ಷಕರತ್ತ ಕೈ ಬೀಸುತ್ತ ನಡೆದೇ ಬಂದರು.
ಸಭಿಕರು ಚಪ್ಪಾಳೆ ತಟ್ಟಿ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನ ಮಂತ್ರಿ ಮೋದಿ ಅವರು ಕರ್ತವ್ಯ ಪಥದ ಇನ್ನೊಂದು ಬದಿಗೂ ದಾಟಿ, ಅಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುತ್ತ ಉತ್ಸುಕರಾದ ಪ್ರೇಕ್ಷಕರು ಅವರನ್ನು ಸ್ವಾಗತಿಸಿದರು.
ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಾಂಪ್ರದಾಯಿಕ ಬಗ್ಗಿಯಲ್ಲಿ ಕರ್ತವ್ಯ ಪಥದಿಂದ ಹೊರಟರು.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...