ಚಟ ಬಿಡದಿದ್ದರೆ ಕ್ಯಾನ್ಸರ್ ಗ್ಯಾರಂಟಿ : (ವೀಕ್ಷಿಸಿ) ಕ್ಯಾನ್ಸರ್ ಆಸ್ಪತ್ರೆ ತಜ್ಞ, ಡಾ. ವಿಶ್ವೇಶ್ವರ

809
Share

ಚಟ ಬಿಡದಿದ್ದರೆ ಕ್ಯಾನ್ಸರ್ ಬರುವುದು ಹೆಚ್ಚಿನ ಸಾಧ್ಯತೆಗಳು ಇದೆಯೆಂದು ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಅಧೀಕ್ಷಕರಾದ ಢಾ. ವಿಶ್ವೇಶ್ವರ ಅವರು ತಿಳಿಸಿದ್ದಾರೆ

ಮೈಸೂರು , ಮೈಸೂರಿನ ರಾಮಕೃಷ್ಣ ನಗರದ E&F ಬ್ಲಾಕಿನಲ್ಲಿರುವ ಸುಯೋಗ ಆಸ್ಪತ್ರೆ ವತಿಯಿಂದ ಇದೇ 6 ರಂದು ಸಿಯೋಗ ಆಸ್ಪತ್ರೆಯಲ್ಲಿ ಮೈಸೂರಿನ ಪ್ರಖ್ಯಾತ ಭಾರತ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ಭಾರತ್ ಕ್ಯಾನ್ಸರ್ ಸೆಂಟರ್ ಕೇಂದ್ರ ಪ್ರಾರಂಭವಾಗಿದ್ದು ವೈದ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಕ್ಯಾನ್ಸರ್ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷರಾದ ಡಾ. ಯೋಗಣ್ಣ ತಿಳಿಸಿದರು.
ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸವನ್ನು ತುಂಬಲು ಕ್ಯಾನ್ಸರ್ ರೋಗಿಗಳನ್ನು ಒಳಗೊಂಡಂತೆ ಕ್ಯಾನ್ಸರ್ ಆತ್ಮವಿಶ್ವಾಸ ಕೇಂದ್ರವನ್ನು ತೆರೆಯಲಾಗಿದ್ದು ಇದು ಸಹ ಅಂದೆ ಉದ್ಘಾಟನೆಗೊಳ್ಳಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಕ್ಯಾನ್ಸರ್ ಆತ್ಮವಿಶ್ವಾಸ ಕೇಂದ್ರವನ್ನು ಖ್ಯಾತ ಸಾಹಿತಿ ಕೆಎಸ್ ಭಗವಾನ್ ಅವರು ಉದ್ಘಾಟಿಸಲಿದ್ದಾರೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಅಧೀಕ್ಷಕರಾದ ಡಾ.
ವಿಶ್ವೇಶ್ವರ ಅವರು ಉಪಸ್ಥಿತರಿದ್ದರು


Share