ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ನೇರ ಪ್ರಸಾರ ವೀಕ್ಷಿಸಿ

163
Share

 

ನೇರ ಪ್ರಸಾರ ಕೃಪೆ ಚಂದನ ದೂರದರ್ಶನ

ಬೆಂಗಳೂರು- ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಖ್ಯಾತ ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ನಂತರ ನೀಡಲಾಗುತ್ತಿರುವ ಕರ್ನಾಟಕ ರತ್ನ ಪ್ರಧಾನ ಕಾರ್ಯಕ್ರಮ ವೀಕ್ಷಿಸಲು ಗಣ್ಯಾತಿ ಗಣ್ಯರು ಸೇರಿದಂತೆ ವಿವಿಧ ರಾಜ್ಯಗಳಿಂದ ಅಪ್ಪು ಅವರ ಆತ್ಮೀಯರುಗಳಾದ ನಟರು ಸೂಪರ್ ಸ್ಟಾರ್ ರಜನಿಕಾಂತ್ ಖ್ಯಾತ ನಟ ಜೂನಿಯರ್ ಎನ್ಟಿಆರ್ ಆಗಮಿಸಿದ್ದಾರೆ.ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮ ವಿಶ್ವವಿಖ್ಯಾತ ಗಾಯಕ ವಿಜಯಪ್ರಕಾಶ್ ಅವರ ಹಾಡು ಹಾಡುವುದರ ಮೂಲಕ ಆರಂಭಗೊಂಡಿತು

ಕರ್ನಾಟಕ ರತ್ನ ಪ್ರಶಸ್ತಿ  ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ 50 ಮಂದಿ ಕುಟುಂಬಸ್ಥರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ ಅಪ್ಪು ಕುಟುಂಬಸ್ಥರು ಎರಡು ಬಸ್ಸುಗಳಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ ಗಣ್ಯಾತಿ ಗಣ್ಯರು ಹಾಗೂ ವಿವಿಧ ಸ್ಥಳಗಳಿಂದ ಬರುತ್ತಿರುವ ನಟರನ್ನು ಸಚಿವ ಸುಧಾಕರ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದಾರೆ ಪುನೀತ್ ಅಭಿಮಾನಿಗಳು ಕೂಡ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ

….. ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ತಮಗೆ ಬಹಳ ಸಂತೋಷವಾಗಿದೆ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ವೈಯುಕ್ತಿಕ, ವ್ಯಕ್ತಿತ್ವ ,ಸ್ವಭಾವ, ನಟನೆ, ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹಾಗೂ ತಮಗೆ ಸಂತೋಷ ನೀಡುತ್ತಿದೆ ಎಂದು ಧರ್ಮಸ್ಥಳ ವೀರೇಂದ್ರ ಹೆಗಡೆಯವರು ತಿಳಿಸಿದ್ದಾರೆ.

 


Share