ಪಟಾಕಿ ಅಂಗಡಿ ಯಲ್ಲಿ ದುರಂತ – 12 ಮಂದಿ ಸಜೀವ ದಹನ

18
Share

ಬೆಂಗಳೂರು-ಪಟಾಕಿ ಅಂಗಡಿಯಲ್ಲಿ ನಡೆದ ದುರಂತದಲ್ಲಿ 12 ಮಂದಿ ಸಜೀವ ದಹನವಾಗಿರುವ ದುರ್ಘಟನೆ ವರದಿಯಾಗಿದೆ.

ಇಂದು ಮಧ್ಯಾಹ್ನ 3:30ರಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಪಟಾಕಿ ಅಂಗಡಿ ದುರಂತದಲ್ಲಿ ಮೃತಪಟ್ಟವರೆಲ್ಲರೂ ತಮಿಳುನಾಡಿನ ಮೂಲದವರು ಎಂದು ತಿಳಿಸಲಾಗಿದ್ದು ಗುರುತು ಸಿಗದ ಹಾಗೆ ದೇಹ ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ.
ಅಗ್ನಿ ದುರಂತದಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಆರು ಗಂಟೆಗಳಿಂದ ಪಟಾಕಿ ಅಂಗಡಿಯಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಮಾಡುತ್ತಿದ್ದಾರೆ.
ಅಗ್ನಿ ದುರಂತ ನಡೆದ ಸ್ಥಳಕ್ಕೆ  ಉಪಮುಖ್ಯಮಂತ್ರಿ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಟಾಕಿ ಅಂಗ್ಡಿಯ ದುರಂತದಲ್ಲಿ ಈಗಾಗಲೇ 12 ಮಂದಿ ಸಜೀವ ದಹನ ವಾಗಿದ್ದು ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ.

Share