ಬಿರುಸಿನ ಪಾದಯಾತ್ರೆ ಶಾಸಕ ಟಿ.ಎಸ್. ಶ್ರೀವತ್ಸ ….

49
Share

ಹುಲ್ಲಿನಬಿದಿ, ಹೊಸಕೇರಿ,ಮಾಧ್ವಚಾರ್ ರಸ್ತೆ, ಸೀತಾ ರಾಮರಾವ್ ರಸ್ತೆ, ಭಾಗಗಳಲ್ಲಿ ಬಿರುಸಿನ ಪಾದಯಾತ್ರೆ ಶಾಸಕ ಟಿ.ಎಸ್. ಶ್ರೀವತ್ಸ ….

ಇಂದು ಬೆಳಗ್ಗೆ ಯಿಂದ ಪ್ರಾರಂಭವಾದ ಪಾದಯಾತ್ರೆಯು ಶ್ರೀ ವಿಘ್ನೇಶ್ವರ ನಿಗೆ ಪೂಜೆ ಸಲ್ಲಿಸಿ ನಂತರ ಆದಂಖಾನ ಮಸೀದಿ ರಸ್ತೆ, ಹೊಸಕೆರಿ, ಹುಲ್ಲಿನ ಬೀದಿ, ಬಸವೇಶ್ವರ ರಸ್ತೆ ಮುಂತಾದ ಭಾಗಗಳಲ್ಲಿ ಸಮಸ್ಯೆಗಳನ್ನು ಆಲಿಸಿದರು ನಿರಂತರ ಸಮಸ್ಯೆಗಳಾದ ರಸ್ತೆ ಚರಂಡಿ, ನೀರು, ವಿದ್ಯುತ್,, ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳೊಡನೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲಾಯಿತು..

ಈ ಪಾದಯಾತ್ರೆಯಲ್ಲಿ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್ ರವರು ಜೊತೆಯಲ್ಲಿದ್ದು ವಾರ್ಡಿನ ಸಮಸ್ಯೆಗಳಲ್ಲಿ ಒಂದಾದ ರಸ್ತೆಯ ಡಾಂಬರಿಕರಣವನ್ನು ಮುಂದಿನ ಒಂದು ತಿಂಗಳೊಳಗೆ ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು, ಹಾಗೆ ಸ್ಥಳದಲ್ಲಿಯೇ ಮರಗಳ ಟ್ರಿಮ್ ಮಾಡಿಸುವುದು , ರಸ್ತೆಯ ಬದಿಯಲ್ಲಿರತಕ್ಕಂತಹ ಕಸದ ಸ್ವಚ್ಚತಾ ಮಾಡಿಸಲಾಯಿತು, ಮತ್ತು ಒಳಚರಂಡಿಯ ವ್ಯವಸ್ಥೆಯನ್ನು ಸ್ಥಳದಲ್ಲಿ ಪರಿಹರಿಸಲಾಯಿತು ಹಾಗೆಯೇ ಸ್ಥಳದಲ್ಲಿಯೇ ವಿದ್ಯುತ್ ಬಿಲ್ಲಿನ ಅನಾನುಕೂಲತೆಗಳ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು…

ಈ ಸಂಧರ್ಭದಲ್ಲಿ ಅರುಣ್,ಗುರುದತ್,ಶಂಕರ್ ಸಿಂಗ್, ದೀನ ಮಣಿ,ಅನ್ನಪೂರ್ಣ,ಕಿಶೋರ್, ಉಷಾ,ಶಂಕರ್,ಉಮೇಶ್, ಅಭಿ,ರವಿ ನಾಯಕ್, ರವಿ ಕುಮಾರ್, ನಿತೀಶ್ ಕುಮಾರ್, ಮಹದೇವ ನಾಯಕ್, ಸೋಮ,ಲೋಕೇಶ್, ಮುಂತಾದವರು ಇದ್ದರು…

 


Share