ಮೈಸೂರು,ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು

240
Share

 

ಮೈಸೂರು ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರ ನೇತೃತ್ವದಲ್ಲಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 62 ,60 ಮತ್ತು 52ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

*ಈ ಕೆಳಕಂಡ ವಾರ್ಡ್ ಗಳಲ್ಲಿ  ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಯಿತು *

1) ವಾರ್ಡ್ ನಂಬರ್ 62 ವಿಶ್ವೇಶ್ವರ ನಗರ ಭಾಗದ ಜಾಕಿ ಫ್ಯಾಕ್ಟರಿ ಯಿಂದ ಗುರುಪಾದಸ್ವಾಮಿ ಮುಖ್ಯರಸ್ತೆಗೆ ಸಂಪರ್ಕ ಹೊಂದುವ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ.

2) ವಾರ್ಡ್ ನಂಬರ್ 60ರ  ಅಶೋಕಪುರಂ ಭಾಗದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಡಾ|| ಬಿ ಆರ್ ಅಂಬೇಡ್ಕರ್ ರವರ ಸಮುದಾಯಭವನದ ಕಟ್ಟಡದ ಅಭಿವೃದ್ಧಿ ಕಾಮಗಾರಿಗೆ ಚಾಲನೆ.

3) ವಾರ್ಡ್ ನಂಬರ್ 52 ರ ಇಟ್ಟಿಗೆಗೂಡು ಭಾಗದ ವ್ಯಾಪ್ತಿಯಲ್ಲಿ ಬರುವ ವೆಂಕಟಲಿಂಗಯ್ಯ ಬಡಾವಣೆಯಲ್ಲಿ ನೂತನ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು
ಕೃಷ್ಣರಾಜ ಕ್ಷೇತ್ರವನ್ನು ಆಕ್ಸಿಡೆಂಟ್ ಫ್ರಿ ಮತ್ತು ಸೇಫ್ಟಿ ರೋಡ್ ಕ್ಷೇತ್ರವನ್ನ ಮಾಡುವ ದೃಷ್ಟಿಯಿಂದ ನಮ್ಮಲ್ಲಿ ಬರುವಂತಹ 421 ಕಿಮೀ ರಸ್ತೆಯಲ್ಲಿ 250  ಕಿಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದೇ ರೀತಿ ವಾರ್ಡ್ ನಂ 62 ರಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ. ಹಾಗೂ ಕ್ಷೇತ್ರದಲ್ಲಿರುವ ಅಷ್ಟೂ ರಸ್ತೆಯನ್ನ, ಸರ್ಕಲ್ ಗಳನ್ನು ಅಭಿವೃದ್ಧಿ ಮಾಡಿ ಮುಗಿಸುತ್ತೇವೆ. ಯುಜಿಡಿ ಸಮಸ್ಯೆ ಅಲ್ಲಲ್ಲಿ ಕಂಡು ಬಂದಿದ್ದು ಅದನ್ನೂ ಸಹ ಸರಿಪಡಿಸಲಿದ್ದೇವೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರಮತಿ ಶಾಂತಮ್ಮ ವಡಿವೇಲು, ಶ್ರೀಮತಿ ಛಾಯಾದೇವಿ ನವೀನ್, ನಾಮನಿರ್ದೇಶಿತ ನಗರಪಾಲಿಕಾ ಸದಸ್ಯರಾದ ಪಿ.ಟಿ. ಕೃಷ್ಣ, ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕುಮಾರ್,  ಪ್ರಮುಖರಾದ ಕಲ್ಯ ಮೂರ್ತಿ, ಮಹದೇವ್, ಮಧು, ರವಿ,ರಾಜು, ರಾಜಣ್ಣ, ರಾಜೀವ, ಕುಮಾರ್, ನಾಗರತ್ನ, ನವೀನ್, ಹೊಯ್ಸಳ, ಜನಾರ್ಧನ್, ವಿನಯ್ ಪಾಂಚಜನ್ಯ, ವಿಜಯ್, ಶಿವರಾಜ್, ಕೃಷ್ಣ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಹಾಜರಿದ್ದರು.


Share