ಮೈಸೂರು ನಾಳೆ ಉದ್ಯೋಗ ಮೇಳ ವೀಕ್ಷಿಸಿ ಮಾಹಿತಿಗಾಗಿ

597
Share

 

ಕೋರೋನ ಮಹಾಮಾರಿ ಪ್ರಪಂಚಾಧ್ಯಂತ ತನ್ನ ಅಟ್ಟಹಾಸ ತೋರಿದ್ದರಿಂದ ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಈಡಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೋರೋನ ಬಂದಂತಹ ಸಮಯದಲ್ಲಿ ಲಾಕ್ಡೌನ್ ನಿಂದಾಗಿ ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿರುವುದರಿಂದ ಬಹಳ ಕಷ್ಟದಲ್ಲಿದ್ದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ರವರು ಕ್ಷೇತ್ರದ ಜನತೆಗೆ ಮತ್ತು ಮೈಸೂರು ಜಿಲ್ಲೆಯ ಜನತೆಗೆ ಅನುಕೂಲ ವಾಗುವಂತೆ ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ದಿನಾಂಕ 19.02.2021 ರ ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಭಿವೃದ್ಧಿ ಇಲಾಖೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಇವರುಗಳು ಸಂಯುಕ್ತಾಶ್ರಯದಲ್ಲಿ ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾಯೋಜನೆ(NCSP) ಅಡಿಯಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿರುತ್ತದೆ.
ಈ ಉದ್ಯೋಗಮೇಳದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಇದಕ್ಕಾಗಿ ಎಲ್ಲಾ ಅವಶ್ಯಕವಾಗಿರುವ ಸಿದ್ಧತೆಗಳನ್ನು ಮಾಡಲಾಗಿರುತ್ತದೆ.
ಉದ್ಯೋಗ ಮೇಳದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಅರಬೈಲ್ ಶಿವರಾಂ ಹೆಬ್ಬಾರ್ ರವರು ನೆರವೇರಿಸಲಿದ್ದು ಮುಖ್ಯ ಅತಿತಿಗಳಾಗಿ ಸನ್ಮಾನ್ಯ ಸಹಾಕರ ಸಚಿವರು ಹಾಗೂ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ರವರು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಪ್ರತಾಪ್ ಸಿಂಹ ರವರು ಆಗಮಿಸುತಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ವಹಿಸಲಿದ್ದಾರೆ.
ಮೈಸೂರಿನ ಹಾಗೂ ನಂಜನಗೂಡಿನ ಸಣ್ಣ ಹಾಗೂ ಬೃಹತ್ ಕೈಗಾರಿಕ ಘಟಕಗಳು ಉದ್ಯೋಗಮೇಳದಲ್ಲಿ ಭಾಗವಹಿಸುತಿದ್ದು, ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಾದ ಎಕ್ಸೆಲ್ ಸಾಫ್ಟ್, ತಿಯರಮ್ಸ್, ದೊಡ್ಡ ಕೈಗಾರಿಕೋಧ್ಯಮಗಳ ಪೈಕಿ ಪ್ರಮುಖವಾಗಿ ಬೆಮಲ್, ಜೆ.ಕೆ ಫ್ಯಾಕ್ಟರಿ, ರಾಣೆ ಮಡ್ರಾಸ್, ದುರ್ಗಾ ಸಲ್ಯೂಷನ್, ಗ್ರಾಸ್ ರೂಟ್ಸ್, ಆದಿತ್ಯಾ ಬಿರ್ಲಾ, ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳಾದ ನೆಸ್ಲೆ, ಜುಬಿಲಿಯಂಟ್, (ಯು.ಬಿ)ಯುನೈಟೆಡ್ ಬ್ರಿವರೀಸ್, ಏಷಿಯನ್ ಪೈಂಟ್ಸ್, ರಂಗ ರಾವ್ ಅಂಡ್ ಸನ್ಸ್, ಎ.ಬಿ.ಬಿ ಇಂಡಿಯಾ ಲಿ., ವಿಕೆಸಿ, ಬಕಾರ್ಡಿ, ಐ.ಟಿ.ಸಿ, ರಿತಿ.ಎಫ್.ಐ ಡಿ.ಸಿ ಸಲ್ಯೂಷನ್, ಬಿಲ್ಡರ್ಸ್ ಅಸೋಸಿಯೇಷನ್ ನ ಕ್ರೆಡಾಯ್ ಸಂಸ್ಥೆಯ ಜಿ.ಎಸ್.ಎಸ್. ಸಂಸ್ಥೆ, ಟ್ರೆಂಡ್ಞ್, ಫೌಂಡೇಷನ್ ಸಂಸ್ಥೆ, ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪನೀಸ್, ಮೈಸೂರು ಫಾರ್ಮ ಫೋರಂ ವತಿಯಿಂದ ಸುಮಾರು 15 ಕಂಪನಿಗಳು ಹೋಟೆಲ್ ಅಸೋಸಿಯೇಷನ್ ವತಿಯಿಂದ ರಾಡಿಸನ್ ಬ್ಲೂ, ಕಂಟ್ರಿ ಇನ್ ಸೂಟ್ಸ್, ಹೆರಿಟೇಜ್ ಹೋಟೆಲ್, ಹೋಟೆಲ್ ಡಾನ್, ವಿಷ್ಣು ಭವನ್, ಮೈಸೂರು ಶಾಲಾ ಅಸೋಸಿಯೇಷನ್ ವತಿಯಿಂದ ಮೈಸೂರಿನ ಪ್ರತಿಷ್ಠಿತ ಶಾಲೆಗಳಾದ ಶಾರದಾ ಪಬ್ಲಿಕ್ ಸ್ಕೂಲ್, ಪ್ರಗತಿ ಎಲೈಟ್ ಶಾಲೆ, ಮಾನಸ ಸರೋವರ ಪುಷ್ಕರಣಿ ಶಾಲೆ, ಸೈಂಟ್ ಥಾಮಸ್ ಎಜುಕೇಷನ್ ಸೊಸೈಟಿ ಯಿಂದ 14 ಶಾಲೆಗಳು , ಬೆಂಗಳೂರಿನಿಂದ ಸುಮಾರು 10ಕ್ಕೂ ಹೆಚ್ಚು ಕಂಪನಿಗಳು. ಬಿಪಿಒ, ಮ್ಯಾನುಫ್ಯಾಕ್ಚರಿಂಗ್, ಓಟ್ ಸೋರ್ಸ್, ಸೆಕ್ಯೂರಿಟಿ ಏಜನ್ಸಿಗಳು, ಗಾರ್ಮೆಂಟ್ಸ್, ಹೆಲ್ತ್ ಸೆಕ್ಟರ್ ಹೀಗೆ ಸುಮಾರು 100ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ವಿವಿಧ ಉದ್ಯೋಗಗಳ ನೇಮಕಾತಿಗಾಗಿ ಭಾಗವಹಿಸಲಿದ್ದರು.
ಎಸ್ಎಸ್ಎಲ್ಸಿ ಪಾಸು/ಫೇಲು, ಪಿಯುಸಿ, ಬಿ.ಎ. ಬಿಕಾಂ, ಬಿ.ಎಸ್.ಸಿ, ಎಂಕಾಂ. ಎಂ.ಎಸ್.ಸಿ, ಐ.ಟಿ.ಐ, ಡಿಪ್ಲೊಮಾ, ಜೆ.ಒ.ಸಿ, ಇಂಜಿನಿಯರಿಂಗ್, ಎಂ.ಟೆಕ್ ಎಂಬಿಎ, ನರ್ಸಿಂಗ್, ಹೀಗೆ ವಿವಿಧ ಕ್ಷೇತ್ರದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಉದ್ಯೋಗಾಕಾಂಕ್ಷಿಗಳು ವಿದ್ಯಾರ್ಹತೆಯ ಅಂಕಪಟ್ಟಿಗಳ ಜೆರಾಕ್ಸ್, ಆಧಾರ್ ಕಾರ್ಡ್, ಸ್ವವಿವರದ ಬಯೋಡೆಟ ಪ್ರತಿಗಳನ್ನು ತರಬೇಕು ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ. ಎಂದು ಸೂಚನೆ ನೀಡಲಾಗಿದೆ.
ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆ, ಕೌಶಲ್ಯಾದಾರಿತವಾಗಿ ಉದ್ಯೋಗ ಕಲ್ಪಿಸಲು ವೇದಿಕೆ ಸಲ್ಲಿಸುತಿದ್ದು ಮೈಸೂರು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆಯಬೇಕೆಂದು ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ಮನವಿ ಮಾಡಿರುತ್ತಾರೆ.
ವಂದನೆಗಳೋಂದಿಗೆ,


Share