ಮೈಸೂರು ಹುತಾತ್ಮರಾದ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ

325
Share

 

ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಅರಿವು ಸಂಸ್ಥೆ ವತಿಯಿಂದ
ಭಾರತ ಮತ್ತು ಚೀನಾ ಗಡಿಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ 16 ಸೈನಿಕರು ಹುತಾತ್ಮರಾಗಿದ್ದಾರೆ.
ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ನಗರದ ನ್ಯಾಯಾಲಯದ ಮುಂಭಾಗ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಕೋರಲಾಯಿತು

ಶ್ರದ್ಧಾಂಜಲಿ ಉದ್ದೇಶಿಸಿ ಮಾತನಾಡಿದ ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ 16 ಜನ ಯೋಧರು ಸಾವನಪ್ಪಿರುವುದು ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬದ ವರ್ಗದವರಿಗೆ ನೋವನ್ನು ತಡೆಯುವ ಶಕ್ತಿ ಪ್ರಾರ್ಥಿಸುತ್ತೇವೆ ಹಾಗೂ ನಮ್ಮ ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಲಕ್ಕಿಸದೆ ದೇಶದ ಗಡಿಯನ್ನು ಕಾಯುತ್ತಿದ್ದ ಇಂತಹ ಯೋಧರಿಗೆ ಈ ರೀತಿ ಆಗಿರುವುದು ನಮ್ಮ ದೇಶದ ಜನಕ್ಕೆ ತುಂಬಾ ನೋವುಂಟಾಗಿದೆ , ಎಂದು ಹೇಳಿದರು

ನಗರಪಾಲಿಕ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ನಗರಪಾಲಿಕ ನಾಮನಿರ್ದೇಶಕ ಜಗದೀಶ್, ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್, ವಿಕ್ರಂ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಪ್ರಸನ್ನ, ಮಹೇಶ್, ಮಧು ಎನ್ ಪೂಜಾರ್, ರಂಗನಾಥ್ ,ಸುನಿ, ನಾಗೇಶ್ ಕುಮಾರ್, ಎಸ್ ಎನ್ ರಾಜೇಶ್, ಗೋಪಿನಾಥ್, ಸುಚೇಂದ್ರ, ಚಕ್ರಪಾಣಿ, ತನುಜಾ ಎಂ ಮಹೇಶ್, ಶ್ರೀಕಾಂತ್ ಕಶ್ಯಪ್, ವಿಘ್ನೇಶ್ವರ ಭಟ್, ಚೇತನ್ ಆರಾಧ್ಯ, ಆನಂದ್ , ಸಂದೇಶ್ ಹಾಗೂ ಇನ್ನಿತರರು ಹಾಜರಿದ್ದರು


Share