ಲಂಚದ ಹಣ ಸುಟ್ಟು ಹಾಕಿದ ಭೂಪ

186
Share

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ್-ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯನೋರ್ವ 50,000 ರೂ ಗಳನ್ನು ಬೆಂಕಿಗೆ ಹಾಕಿ ಸುಟ್ಟ ಪ್ರಸಂಗ ವರದಿಯಾಗಿದೆ. ಕೋಳಿ ಅಂಗಡಿ ಒಂದರ ಪರವಾನಗಿ ನೀಡಲು ಅಬ್ದುಲ್ ಅಹಮದ್ ಎಂಬುವರಿಂದ ಐವತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಟ್ಟಣ ಪಂಚಾತಿ ಸದಸ್ಯ ಕೆ ಸಿ ಹರೀಶ್ ರವರನ್ನು ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿ ಅವರನ್ನು ಸಾಕ್ಷಿ ಸಮೇತ ಬಂಧಿಸಲು ಹೋದಾಗ ತಕ್ಷಣವೇ ಹರೀಶ್ ಗ್ಯಾಸ್ ಒಲೆಯ ಮೇಲೆ ಲಂಚದ ಹಣವನ್ನು ಹಾಕಿ ಸುಟ್ಟು ಹಾಕಿದನೆಂದು ವರದಿಯಾಗಿದೆ. ಸಾಕ್ಷಾಧಾರ ನಾಶ ಹಾಗೂ ಭ್ರಷ್ಟಾಚಾರದ ಮೊಕದ್ದಮ್ಮೆ ದಾಖಲಿಸಿ ಲೋಕಾಯುಕ್ತ ಡಿ ವೈ ಎಸ್ ಪಿ ಮೃತ್ಯುಂಜಯ ರವರು ಹರೀಶನನ್ನು ಬಂಧಿಸಿದ್ದಾರೆಂದು ವರದಿ


Share