ವಾಚಕರ ಪತ್ರ : ಸಿಟಿ ಬಸ್ಸಿನಲ್ಲಿ ಜಾಹಿರಾತು ಫಲಕ ತೆಗೆಯಿರಿ

192
editor
ಮೈಸೂರು ಪತ್ರಿಕೆ
Share

ಪ್ರಕಟಣೆಯ ಕೃಪೆಗಾಗಿ

ಮಾನ್ಯರೆ, 

ನಿನ್ನೆ ಮೈಸೂರಿನ ಎರೆಡು ಸಿಟಿ ಬಸ್ಸಿನಲ್ಲಿ ಪ್ರಯಾಣ ಮಾಡಿದೆ. ಎರೆಡರಲ್ಲು ವಿಪರೀತವಾದ ಜನ ಇದ್ದಿದ್ದರಿಂದ ಕೂರಲು ಸೀಟು ಸಿಗಲಿಲ್ಲ. ಬಸ್ಸಿನಲ್ಲಿ ಮುಂದಿನ ನಿಲ್ದಾಣ ಯಾವುದು ಎಂದು ನಿರ್ದೇಶಿಸುವ ಘೋಷಣೆಯು ಇಲ್ಲ. ಕಿಟಕಿಯ ಮೇಲೆ ಸುತ್ತಲು ಜಾಹಿರಾತು ಹಾಕಿರುವುದರಿಂದ ಹೊರಗಡೆ ಎಲ್ಲಿದ್ದೇವೆ ಎನ್ನುವುದು ನಿಂತವರಿಗೆ ಕಾಣುವುದೂ ಇಲ್ಲ. ಇದರಿಂದ ಬಸ್ಸಿನಿಂದ ಇಳಿಯಲು ಬಹಳ ಕಷ್ಟವಾಯಿತು. ಸಂಬಂಧಪಟ್ಟವರು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸಿನಲ್ಲಿ ಮುಂದಿನ ನಿಲ್ದಾಣದ ಬಗ್ಗೆ ಮಾಹಿತಿ ನೀಡುವುದನ್ನು ಸರಿಪಡಿಸಿ ಇಲ್ಲದಿದ್ದರೆ ಜಾಹಿರಾತುಗಳನ್ನು ತೆಗೆದು ಹಾಕಿ ಎಂದು ಕೇಳಿಕೊಳ್ಳುತ್ತೇನೆ.

– ಶಾಂತಿ , ಬೆಂಗಳೂರು


Share