ಸಣ್ಣ ಕೈಗಾರಿಕೆ ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ

26
Share

 

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾ , ಕಾಸಿಯಾ ಆಡಳಿತ ಮಂಡಳಿ ಸದಸ್ಯ ಶ್ರೀ ಮಂಜುನಾಥ ಮತ್ತು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಹೆಚ್. ಸಿ.ಮಹದೇವಪ್ಪ ರವರನ್ನು ಭೇಟಿ ಮಾಡಿ ಜಿಲ್ಲೆಯ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ವಿನಂತಿಸಿದರು.

ಕೈಗಾರಿಕಾ ಪ್ರದೇಶದ ಮೂಲ ಭೂತ ಸೌಕರ್ಯದ ನ್ಯೂನ್ಯತೆ. ಹೋಟಗಳ್ಳಿ ನಗರ ಸಭೆ ಅವೈಜ್ಞಾನಿಕ ತೆರಿಗೆ , ಕಾರ್ಮಿಕರ ಕನಿಷ್ಠ ವೇತನದ ಸಮಸ್ಯೆ ಗಳನ್ನು ಪ್ರಸ್ತಾಪಿಸಲಾಯಿತು.
ಸಚಿವರು ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಬಗೆಹರಿಸುವುದಾಗಿ ಭರವಸೆ ನೀಡಿದರು.

ಚಿತ್ರದಲ್ಲಿ ಶ್ರೀಮತಿ ಲತಾ ,ಮಾನ್ಯ ಶ್ರೀ ಹೆಚ್. ಸಿ.ಮಹದೇವಪ್ಪ ,ಶ್ರೀ ಮಂಜುನಾಥ ,ಸುರೇಶ್ ಕುಮಾರ್ ಜೈನ ರವರನ್ನು ಕಾಣಬಹುದು.


Share