ಸ್ಯಾಂಟ್ರೋ ರವಿ: ಸಮಗ್ರ ತನಿಖೆಗೆ ಸಿಎಂ ಸೂಚನೆ

184
Share

ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎನ್ನುವ ವ್ಯಕ್ತಿಯ ವಿರುದ್ಧ ಸ್ವತಹ ತನ್ನ ಪತ್ನಿಯೇ ಮೈಸೂರು ಪೊಲೀಸರಿಗೆ ಅತ್ಯಾಚಾರ ಕಿರುಕುಳ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆತನನ್ನು ತೀವ್ರ ರೀತಿಯಲ್ಲಿ ಬಂಧಿಸಲು ಹುಡುಕುತ್ತಿದ್ದಾರೆ. ಸ್ಯಾಂಟ್ರೋ ರವಿ ಎಂದು ಕರೆಯಲ್ಪಡುವ ಈತ ಆಡಳಿತರೂಢ ಭಾರತೀಯ ಜನತಾ ಪಕ್ಷದ ಮುಖಂಡರು ಗಳೊಂದಿಗೆ ಸಂಪರ್ಕವಿರುವುದಾಗಿ, ವಿರೋಧ ಪಕ್ಷದ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರುಗಳು ಹಲವು ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ರವರು, ಇಂದು ಆಧುನಿಕ ಯುಗದಲ್ಲಿ ಯಾರು ಯಾರೊಂದಿಗೆ ಬೇಕಾದರೂ ಆಡಿಯೋ ವಿಡಿಯೋ ಮುಂತಾದ ಸಂಪರ್ಕಗಳನ್ನು ಬಳಸಿಕೊಂಡು ದಾರಿ ತಪ್ಪಿಸುವ ಪ್ರಯತ್ನ ನಡೆಸಬಹುದು, ತಾವು ಇದರ ಬಗ್ಗೆ ಶೀಘ್ರ ,ಪ್ರಾಮಾಣಿಕ ತನಿಖೆ ಮಾಡಿ, ಕೇವಲ ಕಳೆದ ಮೂರು ನಾಲ್ಕು ದಿನಗಳ ಹಿಂದೆ ದಾಖಲಾದ ದೂರು ಅಲ್ಲದೆ ಕಳೆದ 20 ವರ್ಷಗಳಿಂದ ಯಾರ್ಯಾರು ಹೊಂದಿಗೆ ರವಿಯ ನೆಂಟಸ್ತಿಕೆ ಇದೆ ಎಂಬುದನ್ನು ಸಹ ತನಿಖೆ ಮಾಡಿ ಬಯಲು ಮಾಡಬೇಕೆಂದು ಬೊಮ್ಮಾಯಿ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

Share