PollSpiritual GroundVara BhavishyaVideo ಮೈಸೂರು ಪತ್ರಿಕೆ ವಾರ ಭವಿಷ್ಯ 12-10-2020 ರಿ೦ದ 17-10-2020 ವರಗೆ By Mysore Pathrike - October 12, 2020 849 Share WhatsApp Facebook Twitter Google+ Pinterest Linkedin Email Telegram Share ವಾರ ಭವಿಷ್ಯ— (ದಿನಾಂಕ 12-10-2020ರಿಂದ17-10-2020 ರವರೆಗೆ)ಮೇಷ ರಾಶಿನೀವು ಯಾವುದೇ ಕೆಲಸವನ್ನು ದೇವರ ಕೆಲಸವೆಂದು ಮಾಡುತ್ತೀರಿ, ದೈವ ಬಲವಿದೆ, ಹಣಕಾಸಿನ ಅನುಕೂಲ, ಪಿತೃ ವಿಗೆ ದ್ರವ್ಯಲಾಭ ,ಪತ್ನಿಗೆ/ ಪತಿಗೆ ವಾಹನ ಲಾಭ.ವೃಷಭ ರಾಶಿನಿಮಗೆ ಒಳ್ಳೆಯ ಹೃದಯವಂತಿಕೆ ಇದ್ದು ಇನ್ನೊಬ್ಬರ ಸಹಾಯಕ್ಕೆ ನಿಲ್ಲುವಿರಿ, ಸಾಹಿತ್ಯಾಸಕ್ತರು, ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಕಂಡು ಬರುತ್ತೆ.ಮಿಥುನ ರಾಶಿಗುರುಬಲ ಉತ್ತಮವಾಗಿದೆ, ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯಲಿದೆ, ಸಮಯಪ್ರಜ್ಞೆಯಿಂದ ಕೆಲಸ ಮಾಡಿ ಯಶಸ್ಸು ಪಡೆಯುತ್ತೀರಿ, ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ.ಕಟಕ ರಾಶಿನಿಮ್ಮ ಘನತೆ ಗಾಂಭೀರ್ಯ ಸೌದಾ ರ್ಯತೆ ಗಳಿಂದ ಉನ್ನತಿಗೆ ಬರುತ್ತೀರಿ, ದ್ರವ್ಯಲಾಭ, ಆಸ್ತಿಯನ್ನು ಮಾಡಲಿದ್ದೀರಿ, ಮಕ್ಕಳ ಏಳಿಗೆಯಿಂದ ಮನೋಹರ್ಷ ಉಂಟಾಗುತ್ತದೆ.ಸಿಂಹರಾಶಿನಿಮ್ಮ ಮೇಲಿನ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದೆ. ಋಣರೋಗ ಶತ್ರುತ್ವ ನಿವಾರಣೆಯಾಗಲಿದೆ, ಅಧಿಕಾರಿಗಳಿಗೆ ಕೆಲಸದ ಒತ್ತಡ ಅಧಿಕವಾಗಿರುತ್ತದೆ, ಸ್ವಂತ ಉದ್ಯೋಗಕ್ಕೆ ತೀರ್ಮಾನ.ಕನ್ಯಾ ರಾಶಿನಿಮಗೆ ಆಗಾಗ್ಗೆ ಸಮಸ್ಯೆಗಳು ಎದುರಾದರೂ ಸಹ ರಾಜ್ಯಾಧಿಪತಿಯಿಂದ ಬಲವರ್ಧನೆ, ಗುರುವಿನ ಪ್ರಾಬಲ್ಯದಿಂದ ತೊಂದರೆ ನಿವಾರಣೆ, ಹೊಸ್ತಿಲನ್ನು ಪೂಜಿಸಿ, ಹಣೆಗೆ ಕುಂಕುಮ ಧರಿಸುವುದರಿಂದ ಶಾಂತಿ ನೆಮ್ಮದಿ ಲಭ್ಯತುಲಾ ರಾಶಿಶತ್ರುಗಳು ಹುಟ್ಟಿ ಕೊಂಡಿರುತ್ತಾರೆ, ಸಾಲದ ಬಾಧೆಯಿಂದ ಸಮಸ್ಯೆ ಎದುರಾಗಲಿದೆ, ಪೂರ್ವಪುಣ್ಯದಿಂದ ಭಾಗ್ಯೋದಯ, ಮಿತ್ರರ ಸಹಕಾರವೂ ದೂರಪ್ರಯಾಣವೂ ಕಂಡುಬರುತ್ತದೆ.ವೃಶ್ಚಿಕ ರಾಶಿನಿಮಗೆ ಎಲ್ಲಾ ವಿಧದಲ್ಲಿಯೂ ಸೌಲಭ್ಯ ಉಂಟಾದರೂ ಮನಃಶಾಂತಿ ಇರುವುದಿಲ್ಲ ,ಜನ್ಮ ಕೇತು ಸಪ್ತಮ ರಾಹು ದೋಷವಿದೆ ಅದಕ್ಕಾಗಿ ಉದ್ದು ಮತ್ತು ಹುರಳಿ ಯನ್ನುದಕ್ಷಿಣೆ ಸಮೇತ ಗಣಪತಿ ದೇವಾಲಯಕ್ಕೆ ಕೊಡುವುದರಿಂದ ಶುಭ ಉಂಟಾಗುತ್ತದೆ.ಧನಸ್ಸು ರಾಶಿಜನ್ಮರಾಶಿಯಲ್ಲಿ ಗುರು ಪೂರ್ಣ ಬಲವನ್ನು ಹೊಂದಿರುವುದರಿಂದ ವಾಹನ ,ಗೃಹ ಸೌಲಭ್ಯ. ವಿದ್ಯಾಪ್ರಾಪ್ತಿ ಯು ಉದ್ಯೋಗದಲ್ಲಿ ಏಳಿಗೆ ಕಂಡುಬರುತ್ತದೆ.ಮಕರ ರಾಶಿನೀವು ಇನ್ನೊಬ್ಬರ ಹಿತಚಿಂತನೆ ಮಾಡುವಿರಿ, ಜನ್ಮ ಸ್ಥಿತ ಶನಿ ಪಂಚಮ ರಾಹು 12 ರಲ್ಲಿ ಗುರುವು ಇರುವುದರಿಂದ ಅಧಿಕವಾದ ಖರ್ಚುವೆಚ್ಚಗಳು, ವಿವಾಹಕ್ಕೆ ಭಂಗವೂ ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತದೆಕುಂಭ ರಾಶಿಗೃಹಕೃತ್ಯದ ಬಗ್ಗೆ ಅತಿಯಾದ ಚಿಂತೆ ಮಾಡುತ್ತಿದ್ದೀರಿ, ತಂದೆ-ತಾಯಿಯ ಯೋಗಕ್ಷೇಮವನ್ನು ನೋಡಿಕೊಂಡಿರುತ್ತೀರಿ, ಭವಿಷ್ಯವನ್ನು ರೂಪಿಸಿಕೊಳ್ಳಲು ಹಲವಾರು ಕೌಶಲ್ಯಗಳನ್ನು ಮಾಡಿ ಅಭಿವೃದ್ಧಿ ಪಡೆಯಲಿದ್ದೀರಿ.ಮೀನಾ ರಾಶಿನಿಮ್ಮ ಬುದ್ಧಿ ಚಾತುರ್ಯದಿಂದ ಉತ್ಸಾಹ ಶಾಲಿಗಳಾಗಿ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿರುತ್ತೀರಿ, ಹೊಸ ಹೊಸ ಉದ್ಯೋಗಾವಕಾಶಗಳು ಒಲಿದು ಬರಲಿದೆ, ಯಾವುದೇ ವಿಷಯವನ್ನು ಮನೆಯವರೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದು ಉತ್ತಮ. Share