13 ಅಥವಾ 14ರಂದು ಸಂಪುಟ ವಿಸ್ತರಣೆ ಯಡಿಯೂರಪ್ಪ

311
Share

ಬೆಂಗಳೂರು ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕಟಿಸಿದ್ದಾರೆ .
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ 13 ಅಥವಾ 14ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ಖಚಿತವಾಗಿ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಃ ರಚನೆಯಾಗುತ್ತದೆ ಎಂದು ಪ್ರಶ್ನಿಸಿದಾಗ ಕಾದುನೋಡಿ ಎಂದು ಮುಖ್ಯಮಂತ್ರಿ ಕಡಕ್ಕಾಗಿ ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ಇದೇ ತಿಂಗಳು 13/ ಅಥವಾ 14 ರಂದು ರಾಷ್ಟ್ರೀಯ ಅಧ್ಯಕ್ಷರು ಗಡ್ಡ ಅಥವಾ ರಾಜ್ಯ ಉಸ್ತುವಾರಿ ಅರುಣ್ ನೇತೃತ್ವದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.
ಇಬ್ಬರು ಗಣ್ಯರ ಆಗಮನದ ದಿನಾಂಕವನ್ನು ನೋಡಿ ಸಚಿವ ಸಂಪುಟ ವಿಸ್ತರಣೆ ನಿಗದಿಯಾಗುತ್ತದೆ ಎಂದು ಅವರು ತಿಳಿಸಿದರು.
13ರಂದು ಮಧ್ಯಾಹ್ನದ ಮೇಲೆ ಅಮಾವಾಸ್ಯೆ ಇಲ್ಲದೆ ಇರುವುದರಿಂದ ಸಂಜೆ ಸಮಯದಲ್ಲಿ ಸಂಪುಟ ವಿಸ್ತರಣೆ ಕಾರ್ಯಕ್ರಮ ನಡೆಸಿದರೆ ತೊಂದರೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗಲಿದೆ ಎಂದು ಹೇಳುತ್ತಿರುವ ಸಂಬಂಧ ಪ್ರಶ್ನೆ ಕೇಳಿದಾಗ ನೀವು ( ಮಾಧ್ಯಮದವರು ಕೊಪಗೊಂಡು ಯಡಿಯೂರಪ್ಪನವರು ಅಥವಾ ಸಿದ್ದರಾಮಯ್ಯನವರು ಡಿಸೈಡ್ ಮಾಡಿ ಎಂದು ಉತ್ತರಿಸಿ ತೆರಳಿದರು. ಮೈಸೂರು ನಗರದಲ್ಲಿ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ


Share