ಯುಗಾದಿ ವಿಶೇಷ MP ಗಾನಸಿರಿ ಕಾರ್ಯಕ್ರಮಕ್ಕೆ ಚಾಲನೆ

1436
Share

 

ಮೈಸೂರು  ಮೈಸೂರು ಪತ್ರಿಕೆ ಎಂಪಿ ಗಾನಸಿರಿ ಎಂಬ ಕಾರ್ಯಕ್ರಮವನ್ನು ಇ೦ನಿಂದ ಪ್ರಾರಂಭಿಸಿದ್ದು ಗಾನಸಿರಿ ಕಾರ್ಯಕ್ರಮಕ್ಕೆ ವಿದುಷಿ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಶಂಕರ್ ಅವರು ಚಾಲನೆ ನೀಡಿದರು ಇದೇ ಸಂದರ್ಭದಲ್ಲಿ ಮೈಸೂರ್ ಪತ್ರಿಕೆ ತಂಡದ ಮುಖ್ಯಸ್ಥರಾದ ಶ್ರೀಮತಿ ಕವಿತಾ ಶ್ರೀನಿವಾಸನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಇಂದಿನ ಕಾರ್ಯಕ್ರಮ ನಿರೂಪಣೆಯನ್ನು ಚಿನ್ಮಯಿ ಅವರು ನಡೆಸಿಕೊಟ್ಟರು
ಗಾನಸಿರಿ ಕಾರ್ಯಕ್ರಮದ ಬಗ್ಗೆ ವಿವರ ಕೆಳಕಂಡಂತಿರುತ್ತದೆ

ಮೈಸೂರು ಪತ್ರಿಕೆ ಓದುಗರಿಗೆ ಪ್ಲವನಾಮ ಸಂತ್ಸರದ ಶುಭಾಶಯಗಳೊಂದಿಗೆ ಇಂದಿನಿಂದ ವಿನೂತನ ಕಾರ್ಯಕ್ರಮ *MP- ಗಾನಸಿರಿ* ಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ .ಕಳೆದ ದಸರೆಯ ಸಮಯದಲ್ಲಿ ಹತ್ತು ದಿನಗಳು ಇಂತಹದೇ ಕಾರ್ಯಕ್ರಮ ನೀಡಿ ಮೈಸೂರು ಪತ್ರಿಕೆಯು ಮೆಚ್ಚುಗೆ ಗಳಿಸಿತ್ತು ಕೇಳುಗರ ಕೋರಿಕೆಯ ಮೇರೆಗೆ ವಾರಕ್ಕೊಮ್ಮೆ ಇನ್ನು ಮುಂದೆ ಇದೇ ಕಾರ್ಯಕ್ರಮವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ .ಎಲ್ಲ ವರ್ಗದ ಎಲ್ಲ ವಯಸ್ಸಿನ ಹಾಡುಗಾರರಿಗೆ ಈ ವೇದಿಕೆಯನ್ನು ಮೀಸಲಿರಿಸಲಾಗಿದೆ. ವಾರದ ಒಂದುದಿನ 2 ಹಾಡುಗಳನ್ನು ಹಾಡುಗಾರರು ಶುದ್ಧ ಕಂಠದಲ್ಲಿ ಹಾಡಿ ಲ್ಯಾಂಡ್ ಸ್ಕೇಪ್ ನಲ್ಲಿ ಚಿತ್ರೀಕರಿಸಿ ಕಳುಹಿಸಬಹುದು.(ಪಕ್ಕವಾದ್ಯ ಇರಬೇಕೆಂಬ ನಿಯಮವೇನಿಲ್ಲ ). ಇಂದು ವಿಧೂಷಿ ಶ್ರೀಮತಿ ವಿಜಯಲಕ್ಷ್ಮಿ ಅವರ ಕಂಠಸಿರಿಯೊಂದಿಗೆ ಈ ಕಾರ್ಯಕ್ರಮವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.


Share