ವರುಣನ ಆರ್ಭಟ ತಂಪಾಯಿತು ನಗರ

333
Share

ಕಳೆದ ಕೆಲವು ದಿನಗಳಿಂದ ತೀವ್ರ ತಾಪಮಾನದಿಂದ ಕಂಗೆಟ್ಟು ಹೋಗಿದ್ದ ಜನತೆಗೆ ಇಂದು ಸಂಜೆ 1ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಯಿಂದ ಬಹಳ ಸಂತಸ ಉಂಟಾಗಿದೆ .ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ವಿತ್ತಾದರೂ ಸಂಜೆ ಏಳರ ಸುಮಾರಿಗೆ ಭಾರಿ ಮಳೆಯೇ ಸುರಿದು ರಸ್ತೆಗಳಲ್ಲಿ ನೀರು ನಿಂತು ಸ್ವಲ್ಪಮಟ್ಟಿನ ತಾಪಮಾನ ಕಡಿಮೆಯಾಯಿತು . ಇತ್ತೀಚೆಗೆ ತಾನೆ ಹವಾಮಾನ ಇಲಾಖೆಯು . 2-3ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಮನ ಹಬ್ಬದ ಸಂದರ್ಭದಲ್ಲಿ ಮಳೆಬಂದೇ ಬರುವುದು ಎಂದು ನಿರೀಕ್ಷಿಸಿದ್ದ ಜನತೆ ಹುಸಿ ಗೊಂಡಿತ್ತಾದರೂ ಇಂದು ಯುಗಾದಿಯ ಮಳೆ ಸುರಿದು ಹೊಸ ಆಶಯ ಹುಟ್ಟುಹಾಕಿದೆ.ಭಾರಿ ಮಳೆ ಮತ್ತು ವಿದ್ಯುತ್ ಕೈಕೊಟ್ಟಿದ್ದಂಥ ಸಂದರ್ಭದಲ್ಲಿ ಇಂದು ಸಂಜೆ ಮೈಸೂರು- ನಂಜನಗೂಡು ರಸ್ತೆಯ ಜೆಎಸ್ ಎಸ್ ವಿದ್ಯಾಪೀಠದ ಎದುರಿನ ಮುಖ್ಯರಸ್ತೆಯ ಡಿವೈಡರ್ ಗೆ ಮಾರುತಿ ಕಾರೊಂದು ಅಪ್ಪಳಿಸಿ ಜಕ್ಕಂ ಗೊಂಡಿತಾದರೂ ಯಾರಿಗೂ ಯಾವುದೇ ಅಪಾಯವಾಗಿಲ್ಲ .


Share