ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ ಶಾಸ್ತ್ರಿ ಅವರಿಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ

42
Share

 

*ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ ಶಾಸ್ತ್ರಿ ಅವರಿಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ*

ಮೈಸೂರಿನ ಜನಪ್ರಿಯ ಪಂಚವಟಿ ಹೋಟೆಲ್ ಮತ್ತು ಶಾಸ್ತ್ರಿ ಪ್ಯಾರಡೈಸ್
ಮಾಲೀಕರಾದ ರವಿ ಶಾಸ್ತ್ರಿ ರವರು ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಚಾಮುಂಡಿಪುರಂನ ಖಾಸಗಿ ಹೋಟೆಲ್ ನಲ್ಲಿ ಅವರನ್ನ ಅಭಿ‌ನಂದಿಸಲಾಯಿತು,

ಇದೇ ಸಂಧರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರವಿ ಶಾಸ್ತ್ರಿ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಮೈಸೂರಿನಲ್ಲಿ ಹೋಟೆಲ್ ಉದ್ಯಮದಲ್ಲಿ ನೂರಾರು ಜನರಿಗೆ ಕೆಲಸ ಕೊಟ್ಟಿದ್ದೇನೆ ಎಂಬ ತೃಪ್ತಿಯಿದೆ ಅಷ್ಟೆಯಲ್ಲದೇ ಗ್ರಾಹಕರಿಗೆ ವಿವಿಧ ಖಾದ್ಯಗಳ ಪರಿಚಯ ಮತ್ತು ರುಚಿಕರ ಗುಣಮಟ್ಟದ ತಿಂಡಿತಿನಿಸುಗಳ ಕಾಪಾಡುವಿಕೆ ಉತ್ತಮ ಸೇವೆ ಇದೇ ನನ್ನ ಧ್ಯೇಯ, ಹೋಟೆಲ್ ಉದ್ಯಮಿಗಳ ಕಷ್ಟಸುಖಗಳಿಗೆ ಸ್ಪಂದಿಸಲು ಹೋಟೆಲ್ ಮಾಲೀಕರ ಸಂಘದ ಚಟುವಟಿಕೆಗಳಲ್ಲಿ ಸಂಘಟನಾತ್ಮಕಾವಾಗಿ ಹೊಸ ಯೋಜನೆಗಳ ಮೂಲಕ ಶ್ರಮಿಸುತ್ತೇನೆ ಎಂದರು ,

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಉದ್ಯಮಿ ಅಪೂರ್ವ ಸುರೇಶ್, ಜೈರಾಮ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಸುಚೇಂದ್ರ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು

 


Share