ಚಾಮುಂಡಿಬೆಟ್ಟದಲ್ಲಿ ಸಚಿವರಿಂದ ಲಾಡು ವಿತರಣೆ ಸೇವೆ

266
Share

 

ಚಾಮುಂಡಿಬೆಟ್ಟದಲ್ಲಿ ಸಚಿವರಿಂದ ಲಾಡು ಪ್ರಸಾದ ವಿತರಣೆ ಸೇವೆ*

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಆಷಾಢ ಮಾಸದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವರು ವೈಯಕ್ತಿಕವಾಗಿ 50 ಸಾವಿರ ಲಾಡು ಪ್ರಸಾದ್ ಮಾಡಿಸಿ, ಭಕ್ತಾಧಿಗಳಿಗೆ ಸ್ವತಃ ನಿಂತು ಪ್ರಸಾದ ವಿತರಣೆ ಮಾಡಿದರು. ದೇವರ ದರ್ಶನ ಮಾಡಿ ಬರುವ ಎಲ್ಲಾ ಭಕ್ತಾಧಿಕಾಧಿಗಳಿಗೆ ಸಂಜೆ ವರೆಗೂ ಪ್ರಸಾದ್ ವಿತರಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮುಖಂಡರಾದ ಶ್ರೀವತ್ಸ, ಮಂಗಳ ಸೋಮಶೇಖರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


Share