ಚೌಡಯ್ಯನವರ ಸಮಾಧಿಗೆ ಎಚ್‌ಡಿಕೆ ಪುಷ್ಪನಮನ

362
Share

ಎಚ್.ಡಿ.ಚೌಡಯ್ಯನವರ ಸಮಾಧಿಗೆ ಎಚ್‌ಡಿಕೆ ಪುಷ್ಪನಮನ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ (ಏ.೪) ನಾಮಪತ್ರ ಸಲ್ಲಿಸಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆಯ ಮುನ್ನಾ ದಿನವಾದ ಬುಧವಾರ ತಾಲ್ಲೂಕಿನ ಹೊಳಲು ಗ್ರಾಮಕ್ಕೆ ತೆರಳಿದ ಕುಮಾರಸ್ವಾಮಿ ಅವರು ಮಾಜಿ ಶಾಸಕ ದಿ.ಎಚ್.ಡಿ.ಚೌಡಯ್ಯ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮುಖಂಡರಾದ ಎಚ್.ಎಲ್.ಶಿವಣ್ಣ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಹರಿಪ್ರಸಾದ್, ಎಚ್.ಸಿ.ಶ್ರೀಧರ್, ಉದಯ್, ಎಚ್.ಎಸ್.ಯೋಗೇಶ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಅರ್ಪಿತ, ಎಚ್.ಪಿ.ಸಚ್ಚಿದಾನಂದ(ಪಪ್ಪಿ), ಎಚ್.ಎಸ್.ಆನಂದ್, ಎಚ್.ಬಿ.ಶಿವಣ್ಣ, ಎಚ್.ಡಿ.ರವಿ, ಎಚ್.ಎಲ್.ಶಿವಲಿಂಗಯ್ಯ, ಪ್ರದೀಪ್‌ಕುಮಾರ್, ಜಿ.ಬಿ.ಕೃಷ್ಣ, ಪುಟ್ಟಸ್ವಾಮಿ, ಶಂಕರ್‌ಪೂಜಾರಿ, ಮಂಜುನಾಥ್ ಧೀಕ್ಷಿತ್ ಮತ್ತಿತರರಿದ್ದರು


Share