ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಮನುಷ್ಯ ತಾನು ಬಿತ್ತಿದ್ದನ್ನೇ ಪಡೆಯುತ್ತಾನೆ. ಅವನು ತನ್ನ ಕರ್ಮ ಕ್ರಿಯೆಗಳ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಒಳ್ಳೆಯದಾದರು ಅಥವಾ ಕೆಟ್ಟದ್ದಾದರೂ. ಕೆಲವೊಮ್ಮೆ ಇದರ ಪರಿಣಾಮ ಅವನ ಪ್ರಸಕ್ತ ಜೀವನದಲ್ಲಿ ಅಥವಾ ಮುಂದಿನ ಜೀವನದಲ್ಲಿ ಬರಬಹುದು. ಆದರೆ ಖಂಡಿತ ಬರುತ್ತದೆ. ವಾಸ್ತವವಾಗಿ, ನಾವು ನಮ್ಮ ದುಷ್ಟ ಕ್ರಿಯೆಗಳಿಂದ ನಮ್ಮನ್ನು ಶಿಕ್ಷಿಸಿಕೊಳ್ಳುತ್ತೇವೆ ಮತ್ತು ನಮ್ಮ ಒಳ್ಳೆಯ ಕಾರ್ಯಗಳಿಂದ ನಾವೇ ಪ್ರತಿಫಲವನ್ನು ಪಡೆಯುತ್ತೇವೆ.