ಮೈಸೂರು- ಜಿಎಸ್ಟಿ ಹೇರಿಕೆ ವಿರುದ್ಧ ಪ್ರತಿಭಟನೆ

286
Share

 

ಕೇಂದ್ರ ಸರ್ಕಾರ ಸಾರ್ವಜನಿಕರು ಪ್ರತಿನಿತ್ಯ ಬಳಸುವ ಅತಿ ಅಗತ್ಯ ವಸ್ತುಗಳ, ಎಲ್ಲಾ ಪದಾರ್ಥಗಳ ಮೇಲೆ ಹೊಸದಾಗಿ ಅಕ್ಕಿ, ಗೋಧಿ, ಬೇಳೆ, ಮೊಸರು, ಉಪ್ಪು, ಬೆಲ್ಲ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಮೇಲೆ ಜಿಎಸ್ಟಿ ಹೇರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಇಂದು ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ಕೇಂದ್ರ ಸರ್ಕಾರ ಬಡ-ಮಧ್ಯಮ ವರ್ಗದ ಜನರನ್ನು ನೇಣುಗಂಬಕ್ಕೆ – ಶೂಲಕ್ಕೆ ದೂಡುತ್ತಿದೆ ಎಂದು ಅಣುಕು ಪ್ರತಿಭಟನೆಯನ್ನು ನಡೆಸಲಾಯಿತು.

ಕೇಂದ್ರ ಸರ್ಕಾರ ಪ್ರತಿ ದಿನ ಸಾಮಾನ್ಯ ಜನರು ಬಳಸುವ ಅತಿ ಅಗತ್ಯ ವಸ್ತುಗಳ ಪದಾರ್ಥಗಳನ್ನು ದಿನೇ ದಿನೇ ಗಗನಕ್ಕೆ ಏರಿಸುತ್ತಿದೆ. ಇದಕ್ಕೆ ಸರ್ಕಾರ ಯಾವುದೇ ರೀತಿಯಾದ ಕಡಿವಾಣ ಹಾಕುತ್ತಿಲ್ಲ. ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರುತ್ತದೆ. ಈಗಾಗಲೇ ಕಳೆದೆರಡು ವರ್ಷಗಳಿಂದ ಕೋವಿಡ್ ಹಾಗೂ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಜನರು ಒಂದು ತುತ್ತು ಅನ್ನಕ್ಕೂ ಕಷ್ಟ ಪಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಆಹಾರ ಪದಾರ್ಥಗಳಿಗೆ ತಿನ್ನುವ ಅನ್ನ ಹಾಗೂ ಸಮುದ್ರದಲ್ಲಿ ಸಿಗುವ ಉಚಿತ ಉಪ್ಪಿನ ಮೇಲು ಜಿಎಸ್ಟಿ ಹಾಕಿರುವುದು ಅತ್ಯಂತ ನೋವಿತ ಸಂಗತಿಯಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಜನರಿಗೆ ಅಚ್ಚೇ ದಿನಗಳು ಬರುತ್ತಿವೆ ಎಂದು ಹೇಳಿಕೊಂಡು ಬರುತ್ತಿದೆ ಅಷ್ಟೇ. ಆದರೆ ಯಾವೊಬ್ಬ ಭಾರತೀಯನಿಗೂ ಇದುವರೆಗೆ ಅಚ್ಛೇದಿನಗಳು ಬಂದಿಲ್ಲ. ಈಗ ಜನರಿಗೆ ಅತಿ ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಹಾಕಿ ಶಾಕ್ ನೀಡಿದೆ. ಇದೇನಾ ಅಚ್ಚೆ ದಿನ್??.

ಕೇಂದ್ರ ಸರ್ಕಾರ ದೇಶದ ಜನರಿಗೆ ಆಹಾರ ಭದ್ರತೆ ನೀಡುತ್ತಿಲ್ಲ. ಇದೊಂದು ಜನ ವಿರೋಧಿ ಸರ್ಕಾರವಾಗಿದೆ ಹಾಗೂ ಪ್ರಜೆಗಳ ಕಣ್ಣಿಗೆ ಮಣ್ಣು ಎರಚುತ್ತಿದೆ. ಕೇಂದ್ರ ಸರ್ಕಾರ ಜನರಿಗೆ ಉದ್ಯೋಗ ನೀಡುವ ಬದಲಾಗಿ, ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ನಾಶಪಡಿಸುಬಹುದು ಎಂಬುದನ್ನು ಬಿಜೆಪಿ ತೋರಿಸಿ ಕೊಡುತ್ತಿದೆ.

ದೇಶದಲ್ಲಿ ಈಗ ಸಾಮಾಜಿಕ ಭದ್ರತೆಯಲ್ಲ, ಯಾವ ಆರೋಗ್ಯ ಸೇವೆಗಳಿಲ್ಲ,ಉಚಿತ ಶಿಕ್ಷಣಗಳಿಲ್ಲ, ಸರಿಯಾದ ಸಾರ್ವಜನಿಕ ಸೇವೆಗಳಿಲ್ಲ, ರಸ್ತೆಗಳು ಹದಗೆಟ್ಟಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರು ದಿನಾಲು ತಿನ್ನಲು ಬಳಸುವ ಪದಾರ್ಥಗಳ ಮೇಲೆ ಬಡ ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಕ್ಕಿ, ಬೇಳೆ, ಗೋದಿ ಮುಂತಾದವುಗಳ ಮೇಲೆ ಜಿಎಸ್‌ಟಿ ಅನ್ನು ಹಾಕಿ ಸಾರ್ವಜನಿಕರಿಂದ ಹಗಲುದರೋಡೆ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ.

ನಮ್ಮನ್ನು ಆಳುವವರೆಲ್ಲರೂ ಒಂದೇ ಎನಿಸುತ್ತಿದೆ, ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ಸಾಗಲಿ, ಎಲ್ಲರೂ ತಮ್ಮ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಬಡ ವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ, ರಕ್ತ ಹೀರುತ್ತಿದ್ದಾರೆ.

ಈ ಕೂಡಲೇ ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ- ಅತಿ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ವಾಪಾಸು ಪಡೆಯಬೇಕು. ಇಲ್ಲವಾದ ಪಕ್ಷದಲ್ಲಿ ದೇಶಾದ್ಯಂತ ಪ್ರತಿ ನಾಗರಿಕರು ಸಿಡಿದೆದ್ದು ದೇಶ ವ್ಯಾಪಿ ದೊಡ್ಡ ಜನಾಂದೋಲನ ವನ್ನು ಮಾಡಲಿದ್ದಾರೆ ಎಂದು ಎಚ್ಚರಿಸಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಈ ಮನವಿಯನ್ನು ನೀಡುತ್ತಿದ್ದೇವೆ.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ ಕೃಷ್ಣಪ್ಪ, ಪ್ರಜೀಶ್ ಪಿ, ವಿಜಯೇಂದ್ರ, ವಿ.ಜಯಣ್ಣ, ವೈ ಕೆ ನಾಗರಾಜ್, ಮನು ನಾಯಕ್, ಚಂದ್ರಶೇಖರ್ ಎಸ್, ಅನಿತಾ ಚೇತನ್, ಎಳನೀರು ರಾಮಣ್ಣ, ದರ್ಶನ್ ಗೌಡ, ಮಧುವನ ಚಂದ್ರು, ರಾಧಾಕೃಷ್ಣ, ಅಂಬಾ ಅರಸ್, ಪದ್ಮಾ, ಡಾ. ಮೊಗಣ್ಣಾಚಾರ್, ನಂದ ಕುಮಾರ್, ಪ್ರದೀಪ್ ಆರ್, ಡಾ. ನರಸಿಂಹೇಗೌಡ, ಚಂದನ, ಜ್ಯೋತಿ, ಇಂದಿರಾ, ಬಂಗಾರಪ್ಪ, ಗುರುಮಲ್ಲಪ್ಪ, ಗಣೇಶ್ ಪ್ರಸಾದ್,, ಬಸವರಾಜು, ಭರತ್ ಡೀನ್, ಗೊರೂರು ಮಲ್ಲೇಶ್ , ದೀಪಕ್,ಸುಂದರಪ್ಪ, ಮಹದೇವ ಸ್ವಾಮಿ, ಜಗದೀಶ್ ಗೌಡ,ರಾಮ ನಾಯಕ್,ರವಿ ನಾಯಕ್, ಉಮಾದೇವಿ, ವಿಜಯ್ ಕುಮಾರ್, ಕೃಷ್ಣಮೂರ್ತಿ ಹಾಗೂ ಶ್ರೀನಿವಾಸ್  ಭಾಗವಹಿಸಿದ್ದರು


Share