ಮೈಸೂರು ಜಿಲ್ಲೆ – ಗ್ರಾಮದಲ್ಲಿ ಗುಂಪು ಘರ್ಷಣೆ ಇಬ್ಬರ ಸ್ಥಿತಿ ಗಂಭೀರ

414
Share

ಮೈಸೂರು ಜಿಲ್ಲೆ ಗ್ರಾಮದಲ್ಲಿ ಗುಂಪು ಘರ್ಷಣೆ ಇಬ್ಬರ ಸ್ಥಿತಿ ಗಂಭೀರ ಬಾಳೆ ತೋಟ ನಾಶ, ಮೆದೆಗೆ ಬೆಂಕಿ 

ಮೈಸೂರು ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಎರಡು ಗುಂಪಿನ ವ್ಯಕ್ತಿಗಳಿಗೆ ಚಾಕು ಇರಿತ ಉಂಟಾಗಿದ್ದು ಇಬ್ಬರು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಉಳಿದ ಇಬ್ಬರು ನಂಜನಗೂಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ವರದಿಯಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿರುವುದು ವರದಿಯಾಗಿದೆ.
ಕೆಲವು ಕಿಡಿಗೇಡಿಗಳು ಗ್ರಾಮದಲ್ಲಿರುವ ಬಾಳೆತೋಟ ನಾಶಪಡಿಸಿ ಹಾಗೂ ನೆಲೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ ಕೊಂಡಿದ್ದಾರೆ
ಕಳೆದ ಎಂಟು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಸಣ್ಣ ಮಟ್ಟದಲ್ಲಿ ಸಣ್ಣ
ಕಾರಣಕ್ಕಾಗಿ ಮಾತಿನ ಚಕಮುಕಿ ನಡೆದಿದ್ದು ಈ ಸಂಬಂಧ ಪೋಲೀಸರ ಗಮನಕ್ಕೆ ಬಂದಿದ್ದರೂ ಸರಿಯಾದ ಕ್ರಮ ತೆಗೆದುಕೊಳ್ಳದೆ ಇದರಿಂದ ಇಂದಿನ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಗ್ರಾಮದಲ್ಲಿ ಮುಖಮಾಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಚಿತ್ರಕೃಪ ಟೈಮ್ಸ್ ಆಫ್ ಇಂಡಿಯಾ


Share