ಮೈಸೂರು-ಯುವ ರಾಜರ ಜೊತೆ ಯುವ ಸಂವಾದ

105
Share

 

ಮೈಸೂರು-ಯುವ ಸಂಪರ್ಕ ಅಭಿಯಾನ ಹಾಗು ಯುವ ರಾಜರ ಜೊತೆ ಯುವ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

29- ರ ಸಂಜೆ 5. ಗಂಟೆಗೆ ಬಿಜೆಪಿ ಮೈಸೂರು ನಗರ ಯುವಮೋರ್ಚಾ ವತಿಯಿಂದ ಕೆ ಜಿ ಕೊಪ್ಪಲಿನಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಸಂಸದರಾದ ಪ್ರತಾಪ್ ಸಿಂಹ ರವರು, ಲೋಕಸಭಾ ಚುನಾವಣೆಯ ಉಸ್ತುವಾರಿಗಳು,ಮಾಜಿ ಸಚಿವರು ಮೈಸೂರು ನಗರ ಅಧ್ಯಕ್ಷರಾದ ಎಲ್ ನಾಗೇಂದ್ರ ರವರು, ಶಾಸಕರಾದ ಶ್ರೀ ವತ್ಸ ರವರು, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷರದಾ ರಘು ಕೌಟಿಲ್ಯ, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಅನಿಲ್ ಥಾಮಸ್,
ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಕವೀಶ್ ಗೌಡ ಹಾಗು ಮುಂತಾದ ಮುಖಂಡರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಕಾಲ್ನಡಿಗೆಯ ಮೂಲಕ ಬಂದಂತಮ್ಮ ಕಾಳಮ್ಮ ಛತ್ರದ ಆವರಣದಲ್ಲಿ ಯುವ ಸಂಪರ್ಕ ಅಭಿಯಾನ ಹಾಗು ಯುವ ರಾಜರ ಜೊತೆ ಯುವ ಸಂವಾದ
ಕಾರ್ಯಕ್ರಮವನ್ನು 5.30 ರಿಂದ ಏರ್ಪಡಿಸಲಾಗಿದೆ ಈ ಕಾರ್ಯಕ್ರಮಕ್ಕೆ ಎಲ್ಲಾ ಮಂಡಲಗಳ ಕಾರ್ಯಕರ್ತರು ಉಪಸ್ಥಿತರಿರುವರು.


Share