ಸಂಘ ಸಂಸ್ಥೆಗಳ ಮರು ನವೀಕರಣಕ್ಕೆ ಅವಕಾಶ*

348
Share

*ಸಂಘ ಸಂಸ್ಥೆಗಳ ಮರು ನವೀಕರಣಕ್ಕೆ ಅವಕಾಶ* ಐದು ವರ್ಷಕ್ಕೂ ಮೇಲ್ಪಟ್ಟು ನವೀಕರಣ ಆಗದೆ ಇರುವ ಸಂಘ-ಸಂಸ್ಥೆಗಳಿಗೆ ನವೀಕರಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಮೈಸೂರು ಕುಂಚಿಟಿಗರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು ಮಾನ್ಯ ಉಸ್ತುವಾರಿ ಸಚಿವರನ್ನು ಕಳೆದ ಮೂರು ತಿಂಗಳ ಹಿಂದೆ ಬಿಜೆಪಿ ಮುಖಂಡರು ಮತ್ತು ಮೈಸೂರು ಕುಂಚಿಟಿಗರ ಸಂಘದ ಖಜಾಂಚಿ ಎನ್ ಪ್ರದೀಪ್ ಕುಮಾರ್ ರವರ ನೇತೃತ್ವದಲ್ಲಿ ಕುಂಚಿಟಿಗ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಸಂಘ-ಸಂಸ್ಥೆಗಳ ನವೀಕರಣ ಅವಧಿಯು ಕಳೆದ ಡಿಸೆಂಬರ್ ನಲ್ಲಿ ಅಂತ್ಯವಾಗಿದ್ದು ನವೀಕರಣಕ್ಕೆ ಅವಕಾಶವಿಲ್ಲದಂತಾಗಿದೆ ಇದರಿಂದ ರಾಜ್ಯದಲ್ಲಿರುವ ಹಲವಾರು ಸಂಘ ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಮನವಿಯನ್ನು ಸಲ್ಲಿಸಲಾಗಿತ್ತು ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು ಸರ್ಕಾರದಿಂದ ಮರು ಆದೇಶ ಹೊರಡಿಸಿ 2021ರ ಡಿಸೆಂಬರ್ ಅಂತ್ಯದೊಳಗೆ ನವೀಕರಣ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಇದರಿಂದ ರಾಜ್ಯದಲ್ಲಿರುವ ಹಲವಾರು ಸಂಘಸಂಸ್ಥೆಗಳಿಗೆ ಅನುಕೂಲವಾಗಿರುವುದರಿಂದ ಅವರಿಗೆ ರಾಜ್ಯದ ಸಂಘ ಸಂಸ್ಥೆಗಳ ಪರವಾಗಿ ಮೈಸೂರು ಕುಂಚಿಟಿಗರ ಸಂಘದಿಂದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಮೈಸೂರು ಕುಂಚಿಟಿಗರ ಸಂಘದ ಖಜಾಂಚಿ ಎನ್ ಪ್ರದೀಪ್ ಕುಮಾರ್ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಮೈಸೂರು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಎಂ ಪಿ ನಾಗರಾಜ್. ಉಪಾಧ್ಯಕ್ಷರಾದ ಸಿ ಕೆ ಗಣೇಶ್.ಕಾರ್ಯದರ್ಶಿ ಎಂ ಆರ್ ಯೋಗಿಶ್. ಖಜಾಂಚಿ ಎನ್ ಪ್ರದೀಪ್ ಕುಮಾರ್. ನಿರ್ದೇಶಕರಾದ ಸತೀಶ್. ವಿ.ರವಿ.ದೀಪಕ್ ಇದ್ದರು


Share