ಸಂಪಾದಕೀಯ : ಒಂದೇ ಕಲ್ಲಿನಲ್ಲಿ ಎರೆಡು ಹಕ್ಕಿ ಹೊಡೆದ ಕುಮಾರಸ್ವಾಮಿ

144
Share

ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ಮದ್ಯೆ ಭಾರಿ ಜಟಾಪಟಿ ನಡೆದಿತ್ತು. ಸ್ವಾಭಿಮಾನದ ಮತ ಕೇಳಿ ಸುಮಲತಾ ಅವರು ಚುನಾವಣೆಯನ್ನು ಗೆದ್ದಿದ್ದರು ನಿಖಿಲ್ ಕುಮಾರಸ್ವಾಮಿಯವರು ಸೋಲಬೇಕಾಯಿತು.
ಯಾರನ್ನು ವಿರೋಧಿಸಿದ್ದರೋ ಅದೇ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬೆಂಬಲ ನೀಡುವ ಪರಿಸ್ಥಿತಿ ಬಂದಿದೆ ಸಂಸದೆ ಸುಮಲತಾ ಅವರಿಗೆ.
ಕುಮಾರಸ್ವಾಮಿ ಯವರ ಪಕ್ಷ ಯಾರಿಂದ ಕಳೆದ ಬಾರಿ ಸೋತು ಮುಜುಗರಕ್ಕೊಳಗಾಗಿತ್ತೋ ಅವರದೇ ಬೆಂಬಲದೊಂದಿಗೆ ಈ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ.
ಮತ್ತೊಂದು ವಿಷಯ ಎಂದರೆ ಸ್ಥಳೀಯ ಪಕ್ಷಕ್ಕೆ ಹೆಚ್ಚಿನ ಭವಿಷ್ಯ ಕಾಣದಿರುವ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷದೊಂದಿಗೆ ಕೈ ಜೋಡಿಸಿ ಸಚಿವ ಸ್ಥಾನ ಗಿಟ್ಟಿಸಲು ಯೋಚಿಸುತ್ತಿದ್ದಾರೆ ಕುಮಾರಸ್ವಾಮಿ .
ಬಿಜೆಪಿಯೊಂದಿಗಿನ ಮೈತ್ರಿ ಒಂದು ಕಲ್ಲಿನಲ್ಲಿ ಎರೆಡು ಹಕ್ಕಿ ಹೊಡೆಯುವ ಲೆಕ್ಕಾಚಾರವಾಗಿರುವಂತೆ ಕಾಣಬರುತ್ತಿದೆ.
ಒಂದು ವೈಯುಕ್ತಿಕವಾಗಿ ಸುಮಲತಾ ಬೆಂಬಲದೊಂದಿಗೆ ಮಂಡ್ಯದಿಂದ ಸ್ಪರ್ಧೆ , ಮತ್ತೊಂದು ಕೇಂದ್ರ ಪಕ್ಷದೊಂದಿಗಿನ ಮೈತ್ರಿಯಿಂದ ಜೆಡಿಎಸ್ ಪಕ್ಷ ಗಟ್ಟಿಗೊಳಿಸುವಿಕೆ.
ಒಟ್ಟಿನಲ್ಲಿ ಇವರ ಲೆಕ್ಕಾಚಾರ ಏನಾಗುತ್ತದೆ ಕಾದು ನೋಡಬೇಕು.

Share