ಸೇಡು ತೀರಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

285
Share

ನವ ದೆಹಲಿ:
ತನ್ನ ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೋದ ವ್ಯಕ್ತಿಯನ್ನು ಆಗಸ್ಟ್ 13 ರಂದು ದೆಹಲಿಯ ತಿಮಾರ್‌ಪುರ ಪ್ರದೇಶದಲ್ಲಿ ಕೊಲೆ ಆರೋಪಿಗಳು ಸಾರ್ವಜನಿಕವಾಗಿ ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ. ಸಾವನ್ನಪ್ಪಿರುವ ವ್ಯಕ್ತಿ 31 ವರ್ಷದ ಸುನೀಲ್ ಗುನ್ನಿ ಎಂದು ಪೊಲೀಸರು ಗುರುತಿಸಿದ್ದಾರೆ. ಅಪರಾಧ ನಡೆದ 24 ಗಂಟೆಗಳಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.
ಸುನೀಲ್ ಸ್ವತಃ ಕೊಲೆ ಆರೋಪಿಯಾಗಿದ್ದು, ಬಂಧಿತರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ದೆಹಲಿ ಪೊಲೀಸ್ ಉತ್ತರ ವಿಭಾಗದ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ, ಆರೋಪಿಗಳು ಆಗಸ್ಟ್ 12 ರಂದು ಸುನಿಲ್ ಅವರ ಸಹೋದರನನ್ನು ಹೊಡೆದು ಕೊಂದಿದ್ದಾಗಿ ಮರುದಿನ ತನ್ನ ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸುನೀಲ್ ಹೋದಾಗ, ರಾಹುಲ್ ಮತ್ತು ಆತನ ಸಹಚರರಾದ ಅಜಯ್ , ಮುಖೇಶ್, ಮತ್ತು ಅವರ ಸಹಚರರು ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ.
ಘಟನೆಯ ಬಗ್ಗೆ ಕರೆ ಬಂದ ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುನೀಲ್ ಮತ್ತು ರಾಹುಲ್, ಅಜಯ್, ಮುಖೇಶ್ ಮತ್ತು ಅವರ ಸಹಚರರ ನಡುವೆ ಮಾರಾಮಾರಿ ಜಗಳ ನಡೆಯುತ್ತಿದೆ ಎಂದು ಪೊಲೀಸರಿಗೆ ಆರಂಭದಲ್ಲಿ ಹೇಳಲಾಗಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಎಲ್ಲಾ ಆರೋಪಿಗಳು ಓಡಿಹೋಗುವ ಮೊದಲು ಸುನೀಲ್ ಅವರನ್ನು ಬರ್ಬರವಾಗಿ ಥಳಿಸಿದ ಎಂದು ತಿಳಿದು ಬಂದಿದೆ. ಸಂತ್ರಸ್ತನನ್ನು ಗಂಭೀರ ಸ್ಥಿತಿಯಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, ಸುನೀಲ್ ತನ್ನ ಸಹೋದರನ ಹತ್ಯೆಯಲ್ಲಿ ಭಾಗಿಯಾಗಿದ್ದ ರಾಹುಲ್, ಅಜಯ್, ಮುಖೇಶ್ ಮತ್ತು ಇತರರ ಮೇಲೆ ಕುಡಗೋಲಿನೊಂದಿಗೆ ದಾಳಿ ನಡೆಸಿದ್ದಾನೆ. ಆದರೆ, ಸುನೀಲ್‌ನಿಂದ ಕುಡುಗೋಲು ಕಸಿದುಕೊಂಡು ಆರೋಪಿಗಳು ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

Share