ಕವಿತೆಯ ಹುಟ್ಟು ನಾನೊಂದು ಕವಿತೆಯರಚಿಸಲೊರಟೆ ನನ್ನ ಭಾವಗಳೆಲ್ಲವ ಅದರಲ್ಲಿ ತುಂಬಲೊರಟೆ ಸುಮ್ಮನಿರಲು ಬೇಸರ ಏನನ್ನಾದರೂ ಬರೆವ ಕಾತರ ಏನೂ ತೋಚುತ್ತಿಲ್ಲ, ಏನೂ ಹೊಳೆಯುತ್ತಿಲ್ಲ ||1||
ಕವಿತೆ ಹುಟ್ಟವುದು ನಶೆಯಿಂದಲೇ ಎಂಬುದು ವಿದೇಶಿ ಕವಿಯೊಬ್ಬರ ಅನಿಸಿಕೆ ಆದರೆ ಕವಿತೆ ಹುಟ್ಟುವುದು ನಶೆಯಿಂದಲ್ಲ, ಯಾವುದೇ ಆಸೆ – ಆಮಿಷಗಳಿಂದಲ್ಲ ಕವಿತೆಹುಟ್ಟುವುದು ಕವಿಯಾದವನ ಜೀವನಾನುಭಾವದಿಂದ ಅವನ ಮನದಾಳದ ನೋವಿನಿಂದ ||2||
ರವಿ ಕಾಣದ್ದನ್ನು ಕವಿಕಂಡ ಕವಿಯಾದವನು ತಾನು ಬಾಳಿನುದ್ದಕ್ಕೂ ಕಂಡುಂಡ ನೈಜ ಘಟನಾವಳಿಗಳ ಮೂರ್ತರೂಪವೇ ಕವನ ತಾನನುಭವಿಸಿದ ನೋವು -ನಲಿವುಗಳ ಸಮ್ಮಿಶ್ರ ಭಾವವೇ ಕವನ ||3||
ಕವನವೆಂಬುದು ಕವಿ ಹೃದಯದ ಭಾವಗಳ ಸಂಗಮ ಭಾವಗಳ ಮಿಲನದ ಸುಂದರ ರೂಪವೇ ಕವನ ಕವಿಯಾದವನ ಅನುಭವದ ಮೂಸೆಯಲ್ಲಿ ಸೃಷ್ಟಿಯಾದುದೇ ಕವನ ಸಹೃದಯನಾದವನಿಗೆ ನಲಿವಿನ ರಸದೌತಣನೀಡುವುದೇ ಕವನ ||4||
ನೊಂದ ಮನಕ್ಕೆ ಸಾಂತ್ವನ ನೀಡುವ ಮಮತಾಮಯಿಯಂತೆ ಕವನ ಬದುಕಿನ ಏಕತಾನತೆಯನ್ನು ನೀಗಿ ಸದಾ ಜೊತೆಯಿರುವ ಆತ್ಮೀಯ ಗೆಳೆಯನಂತೆ ಕವನ ಬದುಕಿನ ಆರೋಗ್ಯಕ್ಕೆ ಪೂರಕವಾಗಿರುವುದೇ ಕವನ ||5||
ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ ಬ್ಯಾಂಕ್, ಕೆ. ಹೊನ್ನಲಗೆರೆ, ಮದ್ದೂರು ( ಚನ್ನಪಟ್ಟಣ )
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...