ಕಬಡ್ಡಿ ವೇಳೆಯಲ್ಲಿ ಆಟಗಾರನ ದುರಂತ ಅಂತ್ಯ

204
Share

ತಮಿಳುನಾಡಿನ ಕಡಲೂರು ಎಂಬಲ್ಲಿ ಕಬಡ್ಡಿ ಆಟದ ವೇಳೆ ವಿಮಲ್ ಎಂಬ ಆಟಗಾರ ಕಬಡ್ಡಿ ಕಬಡ್ಡಿ… ಎಂದು ಎದುರಾಳಿಗಳನ್ನು ಹಾರಿ ತಪ್ಪಿಸಿಕೊಳ್ಳುವ ಸಮಯದಲ್ಲಿ ಕೆಳಗೆ ಬಿದ್ದು ಹೃದಯಾಘಾತವಾಗಿ ಅಸುನೀಗಿದಘಟನೆ ವರದಿಯಾಗಿದೆಕಳೆದ 24 ರಂದು ಈ ದುರಂತ ಸಂಭವಿಸಿದ್ದು ವಿಮಲ್ ಅವರ ಅಂತ್ಯಸಂಸ್ಕಾರದಲ್ಲಿ ಕಬಡ್ಡಿ ಟ್ರೋಫಿಯನ್ನು ಅವರ ಜತೆಯಲ್ಲೇ ಇಟ್ಟು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.ಕಳೆದ ಜುಲೈ ಹದಿಮೂರ ರಂದು ಬೆಂಗಳೂರಿನಲ್ಲಿ ಬಾಕ್ಸಿಂಗ್ ವೇಳೆಯಲ್ಲಿ ಕಪಾಳ ಮೋಕ್ಷ ಕ್ಕೆ ಒಳಗಾದ ಮೈಸೂರಿನ ಯುವಕನೊಬ್ಬ ಅಸುನೀಗಿದ್ದನ್ನು ಇಲ್ಲಿ ಸ್ಮರಿಸಬಹುದು.


Share