ದಿವ್ಯಾ ಆತ್ಮಕ್ಕೆ ದೀಪ ಬೆಳಗಿ ಮೂಲಕ ಮೌನ

271
Share

 ಮೈಸೂರು,ಟೀಂ ಮೈಸೂರು ಪ್ರತಿಷ್ಠಾನದ ವತಿಯಿಂದ ಇಂದು ಗಾಂಧಿ ವೃತದಲ್ಲಿ ಮಳವಳ್ಳಿಯ ವಿದ್ಯಾರ್ಥಿನಿ ದಿವ್ಯಾ ಆತ್ಮಕ್ಕೆ ದೀಪಗಳನ್ನು ಬೆಳಗುವ ಮೂಲಕ ಶಾಂತಿ ಕೋರಿ ಒಂದು ನಿಮಿಷ ಮೌನಾಚಾರಣೆ ಮಾಡಲಾಯಿತು. ಈ ಪೈಷಾಚಿಕ ಕೃತ್ಯ ಎಸಗಿದ ಕಾಮುಕನನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಲಾಯಿತು.
ದೇಶದಲ್ಲಿ ಈ ರೀತಿಯ ಕೃತ್ಯ ಗಳಿಗೆ ಇನ್ನು ಹೆಚ್ವಿನ ಶಿಕ್ಷಯನ್ನು ನೀಡುವ ಕಾನೂನು ತರಬೇಕೆಂದು ಅಗ್ರಹಿಸಲಾಯಿತು
ಈ ಸಂದರ್ಭದಲ್ಲಿ ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್, ಸಹ ಸಂಚಾಲಕರಾದ ಯಶವಂತರವರು, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸೋಮಶೇಖರ್ ರಾಜುರವರು, ತಂಡದ ಹಿರಿಯರಾದ ಅನಿಲ್ ಜೈನ್, ಕಿರಣ್ ಜೈರಾಮ್ ಗೌಡ, ಆನಂದ್, ಮುರಳಿ, ಲಿಂಗರಾಜು, ಯತೀಶ್, ಸುನಿಲ್, ಸುಮಂತ್, ಗಣೇಶ, ರಘು ಇನ್ನೂ ಮುಂತಾದವರು ಹಾಜರಿದ್ದರು.


Share