ಬೆಟ್ಟಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ

30
Share

ಮೈಸೂರು-ಶ್ರೀ ಶೋಭ ಕ್ರ  ತ್ ನಾಮ ಸಂವತ್ಸರದ ಪ್ರಥಮ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟದಲ್ಲಿರುವ ದೇವಿ ದರ್ಶನವನ್ನು ಪಡೆಯಲು ಭಕ್ತರ ಸಾಗರ ಹರಿದು ಬರುತ್ತಿರುವ ದೃಶ್ಯ ಕಂಡುಬಂದಿತು. ಇಂದು ಬೆಳಗ್ಗೆ 5:00 ಯಿಂದ ಭಕ್ತರು ಬಸ್ಸಿನ ಮೂಲಕ ಹಾಗೂ ಮೆಟ್ಟಲನ್ನು ಹತ್ತಿಕೊಂಡು ಬರುವುದರ ಮೂಲಕ ದೇವಿ ದರ್ಶನಕ್ಕೆ ಹರಿದು ಬರುತ್ತಿದ್ದ ದೃಶ್ಯ ಕಂಡುಬಂದಿತು.

ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನಕ್ಕೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ನೇರದರ್ಶನ ಅವಕಾಶ ಮಾಡಿಕೊಡಲಾಗಿದೆ ವಿಶೇಷ ದರ್ಶನದ ಸರಿಧಿಯಲ್ಲಿ ಉಚಿತವಾಗಿ ದೇವಾಲಯ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಹಿರಿಯರೊಂದಿಗೆ ಸಹಾಯಕ ತೆರಳುವವರಿದ್ದರೆ ಅವರಿಗೆ ಟಿಕೆಟ್ ಪಡೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಬೆಳಗಿನ ಜಾವ 3:00ಯಿಂದಲೇ ಚಾಮುಂಡಿ ಬೆಟ್ಟಕ್ಕೆ ತೆರಳಲು ಈ ಬಾರಿ ಅವಕಾಶ ಮಾಡಿಕೊಡಲಾಗಿದೆ ಮಾರ್ಗ ಮಧ್ಯದಲ್ಲಿ ತೊಂದರೆಯಾದರೆ ಅರಣ್ಯ ಇಲಾಖೆಯ 1926. ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ರಾತ್ರಿ 8:00ಯವರೆಗೆ ಬೆಟ್ಟಕ್ಕೆ ತೆರಳಲು ಬಸ್ಸಿನಲ್ಲಿ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

Share