ಮಕ್ಕಳಿಂದ ಅವರ ಬಾಲ್ಯದ ಮುಗ್ದತೆಯನ್ನು ಕಸಿಯದಿರೋಣ”

122
Share


*-*ಡಾ. ಶ್ವೇತಾ ಮಡಪ್ಪಾಡಿ** ಸಲಹೆ.
ಮೈಸೂರು-ಮಕ್ಕಳು ನಮ್ಮ ಸಮಾಜದ ನೆಮ್ಮದಿಯ ಕೇಂದ್ರಗಳು. ಅವರ ಒಡನಾಟ ಬದುಕಿನ ಯಾಂತ್ರಿಕತೆಯ ಒತ್ತಡವನ್ನು ಕಡಿಮೆ ಮಾಡಬಲ್ಲವು. ಆದರೆ ಮಕ್ಕಳ ಬಾಲ್ಯದ ಸಂಭ್ರಮವನ್ನು ಅವರ ಮೇಲೆ ಶೈಕ್ಷಣಿಕ ಒತ್ತಡವನ್ನು
ಹೇರುವುದರ ಮೂಲಕ ನಾವು ನಾಶಗೊಳಿಸುತ್ತಿದ್ದೇವೆ.
ಮಕ್ಕಳನ್ನು ಕೃತಕತೆಯ ಭಾವಗಳಿಗೆ ತಳುಕು ಹಾಕಿ ಅವರ ಬಾಲ್ಯದ ಮುಗ್ದತೆಯನ್ನು ನಾವು ನಾಶಗೊಳಿಸದಿರೋಣ” ಎಂದು ಯುವ ಉದ್ಯಮಿ, ಚಿಂತಕಿ, ಧ್ವನಿ ಫೌಂಡೇಷನ್ ನ ಸ್ಥಾಪಕಾಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ಹೇಳಿದರು. ಮೈಸೂರಿನ ರೋಟರಿ ಬೃಂದಾವನ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳ ಪದವಿ ಪ್ರಧಾನ ಹಾಗೂ ‘ಅಜ್ಜ-ಅಜ್ಜಿಯರ ದಿನಾಚರಣೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. “ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿ ಕಾಳಜಿ ತೋರುವ ಹೆತ್ತವರು ಹಲವು ಬಾರಿ ಅವರ ಆಯ್ಕೆಗಳ ವಿಷಯದಲ್ಲಿ ಎಡವುತ್ತಾರೆ. ಅತಿಯಾದ ಶೈಕ್ಷಣಿಕ ಒತ್ತಡ ಮಕ್ಕಳ ಮನೋವಿಕಾಸ ಕುಗ್ಗಿಸಿ ಭವಿಷ್ಯಕ್ಕೆ ಹೊಡೆತ ನೀಡಬಲ್ಲುದು. ಹಾಗಾಗಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಬಹುಮುಖ್ಯ ಆದ್ಯತೆ ಆಗಿರಬೇಕು. “ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಬೃಂದಾವನದ ಮುಖ್ಯಸ್ಥರಾದ ಎ. ಜಿ. ನಂಜಪ್ಪ ಸ್ವಾಮಿ,ಕಾರ್ಯದರ್ಶಿ ರೊ.ಮಂಜುನಾಥ್, ರೊ.ನಾಗೇಶ್, ರೊ.ಪ್ರಕಾಶ್ ಹನಸೋಗೆ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಎಂ. ಎಸ್. ಇವರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ಮಕ್ಕಳಿಂದ ಹಾಗೂ ಮಕ್ಕಳ ಅಜ್ಜ ಅಜ್ಜಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


Share