ಸಂಪಾದಕೀಯ : ಮಾಡಿದ್ದುಣ್ಣೋ ಮಾರಾಯ

110
Share

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಕಣ್ಣು ಮಂಡ್ಯದ ಕಡೆ ಇತ್ತು. ಡಿಕೆಶಿ ಹಾಗೂ ಕುಮಾರಸ್ವಾಮಿ ತಮ್ಮನ್ನು ತಾವು ಜೋಡೆತ್ತು ಎಂದು ಹೇಳಿಕೊಂಡು ಚುನಾವಣಾ ಎದುರಿಸಿದ್ದರು. ಆ ಚುನಾವಣೆಯ ಮತ್ತೊಂದು ಕುತಂತ್ರ ಸುಮಲತಾ ಹೆಸರಿನಲ್ಲಿ ಬೇರೆಯವರು ಸಾಕಷ್ಟು ಜನ ಚುನಾವಣೆಯಲ್ಲಿ ಸ್ಪರ್ಧಿಸಿದ್ದು. ಇದರಿಂದ ಜನರನ್ನು ತಪ್ಪುದಾರಿಗೆ ಎಳೆದು ಮತ ಹಂಚಿಕೆ ಆಗುವಂತೆ ಮಾಡುದ್ದು.
ಅಂದು ಜೋಡೆತ್ತಾಗಿದ್ದವರು ಇಂದು ಬೇರೆ ಬೇರೆಯಾಗಿ ವಿರುದ್ದವಾಗಿ ಚುನಾವಣೆ ಎದುರಿಸುತ್ತಿದ್ದಾರೆ ಇಬ್ಬರೂ ( ಎರೆಡು ಎತ್ತುಗಳು ).
ಬೆಂಗಳೂರು ಗ್ರಾಮಾಂತರದಿಂದ ಈ ಬಾರಿಯೂ ಮತ್ತೇ ಅದೇ ಕುತಂತ್ರ ಪ್ರಯೋಗಿಸುತ್ತಿದ್ದಾರೆ. ಮಂಜುನಾಥ್ ಹೆಸರಿನಲ್ಲಿ 5 ಜನರು ನಾಮಪತ್ರ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಇದನ್ನು ಎದುರಿಸುತ್ತಿರುವುದು ಜೆಡಿಎಸ್.
ಇದನ್ನೆ ಅಲ್ಲವೆ ಮಾಡಿದ್ದುಣ್ಣೋ ಮಾರಾಯ ಎನ್ನುವುದು.


Share