* ರೈಲಿನಲ್ಲಿ ಎಸಿ-3 ಎಕಾನಮಿ(3ಇ) ಎಂಬ ಹೊಸ ದರ್ಜೆಯನ್ನು ಪರಿಚಯಿಸಿದ ಕೇವಲ 14 ತಿಂಗಳಲ್ಲೇ ಅದನ್ನು ಸ್ಥಗಿತಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. 3ಇ ದರ್ಜೆಯನ್ನು ಎಸಿ-3ಯೊಂದಿಗೆ ವಿಲೀನಗೊಳಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
* ಟ್ಯಾಂಕರೊಂದು ಹಲವಾರು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಮಂದಿ ಗಾಯಗೊಂಡ ಘಟನೆ ಪುಣೆಯಲ್ಲಿ ನಡೆದಿದ್ದು ಪುಣೆಯ ನವಲೆ ಸೇತುವೆಯ ಮೇಲೆ 48 ವಾಹನಗಳು ಜಖಂಗೊಂಡಿವೆ.
* ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ
* ಗುಜರಾತಿನ ಸುರೇಂದ್ರ ನಗರದಲ್ಲಿ ಚುನಾವಣಾ ಭಾಷಣದಲ್ಲಿ ನಿರತರಾಗಿರುವ ಮೋದಿಯವರು ಪ್ರಸಕ್ತ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಪಾದಯಾತ್ರೆಯಲ್ಲ ಅಧಿಕಾರದ ಲಲಾಸೆ ಎಂದಿದ್ದಾರೆ.
* ಇದೇ ಶನಿವಾರ ಇಸ್ರೋ 3 ನೇ ಹೈಪರ್ ಸೆಕ್ಟರ್ ಸ್ಯಾಟಲೈಟ್ ಅನ್ನು ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ನಬೋಮಂಡಲಕ್ಕೆ ಹಾರಿಸಲಿದೆ.
ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ವಿಪ್ರ ಜಾಗೃತಿ ವೇದಿಕೆ ವತಿಯಿಂದ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಆದಿ ಗುರು ಶ್ರೀ ಶಂಕರಾಚಾರ್ಯರ ರಥೋತ್ಸವ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಲಂಕೃತ ವಾಹನದಲ್ಲಿರಿಸಿ ವಿದ್ಯಾರಣ್ಯಪುರಂ ಮುಖ್ಯ...