*ಸದ್ಬುದ್ದಿ….!*
ಉಸಿರಿದ್ದಾಗ ಹೆಸರ ಕೇಳಿದರು ಉರಿದು ಬಿದ್ದು, ಕುದ್ದು ಹಲುಬುವ ಮಂದಿ, ಉಸಿರು ನಿಂತಾಗ ಕಣ್ಣೀರಾಕಿ ನಾಟಕವಾಡಿದರೆಂತ ಪ್ರಯೋಜನವಯ್ಯ…..! ಬದುಕಿದ್ದಾಗಲೇ ತಪ್ಪು, ಒಪ್ಪುಗಳ ಅಪ್ಪಿ ಮುನಿಸ ದೂರಾಗಿಸಿ ಒಳಿತ ಬಯಸಿ, ನಾಲ್ಕು ಒಳ್ಳೆಯ ಮಾತಾಡಿದರೆ ಸಾಕಯ್ಯ, ಎನ್ನ ರಾಮನವನು ಒಲಿವನು, ಸದ್ಬುದ್ದಿಯ ಕರುಣಿಸಿ.
*ಖುಷಿಯಾಗಿರಿ – ಹೃದಯವಂತರಾಗಿರಿ*
*ರಾಮ್ ಮೈಸೂರು*