ತನ್ನನ್ನು ತಾನೇ ಅಪಹರಿಸಿಕೊಂಡು ತಂದೆಯ ಬಳಿಯೆ ಹಣ ವಸೂಲಿಗೆ ಪ್ರಯತ್ನ

19
Share

ಮುಂಬೈ:
ಮುಂಬೈನ 27 ವರ್ಷದ ವ್ಯಕ್ತಿಯೊಬ್ಬನು ತನ್ನನ್ನು ತಾನೇ ಅಪಹರಣ ಮಾಡಿಕೊಂಡು ತನ್ನ ಸಾಲವನ್ನು ಮರುಪಾವತಿಸಲು ಕುಟುಂಬದಿಂದಲೇ ಸುಲಿಗೆ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿಯು ಜಿತೇಂದ್ರ ಜೋಷಿ ಎಂದು ಗುರುತಿಸಲಾಗಿದೆ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ ಅಜಯ್ ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಜಿತೇಂದ್ರ ಜೋಶಿ ಎಂಬ 27 ವರ್ಷದ ವ್ಯಕ್ತಿ ತನ್ನನ್ನು ತಾನೇ ಅಪಹರಣ ಮಾಡಿ, ತನ್ನ ಸಾಲವನ್ನು ಮರುಪಾವತಿಸಲು ತನ್ನ ಕುಟುಂಬದಿಂದಲೇ ಸುಲಿಗೆ ಮಾಡಲು ಪ್ರಯತ್ನಿಸಿದ್ದಾನೆ” ಎಂದು ಡಿಸಿಪಿ ತಿಳಿಸಿದ್ದಾರೆ.
ಜೋಶಿ ಅವರ ಪತ್ನಿಗೆ ವಾಟ್ಸಾಪ್ ಕರೆ ಒಂದು ಬಂದಿದ್ದು, ಆಕೆಯ ಪತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ತಿಳಿಸಿ, 5 ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಲಾಯಿತಂತೆ. ಆರೋಪಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
12 ಗಂಟೆಯೊಳಗೆ ಜೋಶಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಆತ ತನ್ನ ತಂದೆಯಿಂದ ಹಣ ಪಡೆಯಲು ತನ್ನನ್ನೇ ತಾನು ಸ್ವಂತ ಅಪಹರಣ ಮಾಡಿಕಿಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಜೂನ್ 3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

Share