ಮೈಸೂರಿನ ಅವಧೂತ ದತ್ತ ಪೀಠದ ಕರಕಮಲ ಸಂಜಾತ ರಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಯವರು ಪ್ರತಿಯೊಬ್ಬರು ಅವರವರ ಪದ್ಧತಿ, ಸಂಪ್ರದಾಯದಂತೆ ತಪ್ಪದೆ ಕರೋನ ನೀತಿ ನಿಸಮಗಳನ್ನು ಪಾಲಿಸುತ್ತ ಆಚರಿಸಬೇಕೆಂದು ತಿಳಿಸಿದ್ದಾರೆ.
ಶ್ರೀ ಸ್ವಾಮೀಜಿ ಯವರು ನಾಡದೇವತೆ ಚಾಮುಂಡಿ ನಮ್ಮನ್ನು ಕಾಪಾಡುತ್ತಿದ್ದಾಳೆ. ಕರ್ನಾಟಕದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಪದ್ಧತಿ ಇದೆ. ಆಶ್ರಮದಲ್ಲೂ ಕಳೆದ 50 ವರ್ಷಗಳಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಆಚರಿಸಿಕೊಂಡು ಬರುತ್ತಿದ್ದು ಈ ಭಾರಿ ಸರ್ಕಾರದ ಸೂಚನೆಯಂತೆ ಸರಳವಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು. ಕರೋನ ಎಂಹುದು ಒಂದು ಮಾಯೆ. ಪರಾಶಕ್ತಿಯ ಅಧೀನದಲ್ಲಿರುವುದು ಮಾಯೆ. ಆದ್ದರಿಂದ ಎಲ್ಲರೂ ವಿಜಯದಶಮಿ ಯಂದು ದೇವಿಯನ್ನು ಈ ಸಂಕಷ್ಟ ದಿಂದ ಪಾರು ಮಾಡಲು ಪ್ರಾರ್ಥನೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.