ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ವಾರಭವಿಷ್ಯ.-10 -20 20 ರಿಂದ 10 -10 -20 20 ರವರೆಗೆ)

1230
Share

ವಾರ ಭವಿಷ್ಯ

(ದಿನಾಂಕ 4 -10 -20 20 ರಿಂದ 10 -10 -20 20 ರವರೆಗೆ)

ಮೇಷ ರಾಶಿ
-ಗುರು ಶನಿ ಬಲವು ಉತ್ತಮವಾಗಿರುತ್ತದೆ, ಕಲೆ- ಸಾಹಿತ್ಯ ,ಸಂಗೀತದಲ್ಲಿ ಆಸಕ್ತಿ , ಕಲಾವಿದರಿಗೆ ಅಭೂತಪೂರ್ವ ಯಶಸ್ಸು,,ಕೌಟುಂಬಿಕ ಸಮಸ್ಯೆಗಳು ಎದುರಾಗಲಿದೆ.

ವೃಷಭ ರಾಶಿ-ಬುಧ ಶುಕ್ರ ವಿಶೇಷ ಬಲದಿಂದ ಅನಾಯಾಸವಾಗಿ ದ್ರವ್ಯಲಾಭ, ಸಿನಿಮಾರಂಗದಲ್ಲಿ ಒಳ್ಳೆಯ ಅವಕಾಶ, ದಾನ ಕಾರ್ಯದಿಂದ ಶುಭ.

ಮಿಥುನ ರಾಶಿ ಗುರು ಕುಜರ ಸ್ಥಾನ ಬಲಉತ್ತಮ ,ಹಣಕಾಸಿನ ಅಭಿವೃದ್ಧಿ ಉಂಟಾಗುತ್ತದೆ, ಅನಿರೀಕ್ಷಿತ ಖರ್ಚುಗಳು ಸಂಭವನೀಯ.

ಕಟಕ ರಾಶಿ-*ರಾಹುವಿನ ಬಲ, ರವಿ ಬುದರ ಒಲವು ಉತ್ತಮವಾಗಿರುವುದು, ಬ್ಯಾಂಕಿನಿಂದ ಸಾಲ ದೊರೆಯಲಿದೆ ,ಆರ್ಥಿಕ ತೊಂದರೆ ನಿವಾರಣೆ ಆಗುತ್ತದೆ.

ಸಿಂಹರಾಶಿ ಗುರುವಿನ ಸ್ಥಾನ ಬಲದಿಂದ ದೈವಭಕ್ತಿ,ಮಕ್ಕಳಿಗೆ ಏಳಿಗೆ ,ಗೃಹದಲ್ಲಿ ಮಂಗಳ ಕಾರ್ಯ ಅನುಕೂಲಗಳು ಉಂಟಾಗುತ್ತದೆ, ಕುಜನಜನ ಶಾಂತಿ ಮಾಡಬೇಕು.

ಕನ್ಯಾ ರಾಶಿ
ರವಿ ಬುಧರು ವಿಶೇಷವಾಗಿ ಕಲಾ ನೈಪುಣ್ಯತೆ, ಕಾರ್ಯಗಳಲ್ಲಿ ಯಶಸ್ಸು ,ಹಣಕಾಸಿನ ಅನುಕೂಲ ,ಮಕ್ಕಳು ವ್ಯಾಸಂಗದಲ್ಲಿ ನಿರತರಾಗಿರುವರು.

ತುಲಾ ರಾಶಿ ಸಮಾಜಸೇವೆ ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ,ವಿದ್ವಾಂಸರ ಭೇಟಿ ,ಮನೆಗೆ ಸ್ವಸ್ತಿಕ್ ಅಳವಡಿಕೆಯಿಂದ ಶುಭ.

ವೃಶ್ಚಿಕ ರಾಶಿ– ನಡೆನುಡಿಗಳು ಉತ್ತಮವಾಗಿರುತ್ತದೆ, ಹಣಕಾಸು ಬಿಕ್ಕಟ್ಟು ಇರುವುದಿಲ್ಲ, ಬರವಣಿಗೆ ಅಧ್ಯಯನದಲ್ಲಿ ತೃಪ್ತಿ ಉಂಟಾಗುತ್ತದೆ.

ಧನಸ್ಸು ರಾಶಿ– ಅವಿವಾಹಿತರಿಗೆ ವಿವಾಹ ಮಾತುಕತೆ, ನಿರುದ್ಯೋಗ ನಿವಾರಣೆ ,ಗುರು ಹಿರಿಯರಲ್ಲಿ ಭಕ್ತಿ , ದೈವಾನುಕೂಲ ಉತ್ತಮವಾಗಿರುತ್ತದೆ.

ಮಕರ ರಾಶಿ
-ಜನ್ಮ ಶನಿ ವ್ಯಯದಲ್ಲಿ ಗುರು ಇರುವುದರಿಂದ ಹಲವು ವಿಧದಲ್ಲಿ ಅಸಮಾಧಾನದಿಂದ ಕೂಡಿರುವಿರಿ, ವರಹಸ್ವಾಮಿ ಪೂಜೆಯಿಂದ ಸಂಕಷ್ಟ ನಿವಾರಣೆ.

ಕುಂಭ ರಾಶಿ
-ಗುರು ಬಲವಿದ್ದು ಸಂತಸ ಸಡಗರ ಸಂಭ್ರಮದಿಂದ ಕೂಡಿರುತ್ತೀರಿ, ಕಣ್ಣು ಮೂಗು ಇವುಗಳಿಗೆ ಸಂಬಂಧಿಸಿದ ಭಾದೆ ಇರುತ್ತದೆ, ಶನಿ ಸ್ತೋತ್ರದಿಂದ ಪರಿಹಾರ.

ಮೀನಾ ರಾಶಿ ಉದ್ಯೋಗದಲ್ಲಿ ಏಳಿಗೆ, ಗೃಹದಲ್ಲಿ ಸಂತಸದ ಅನುಕೂಲ ಉಂಟಾಗಲಿದೆ, ನಾಗಪ್ರತಿಷ್ಠೆಗೆ ಕ್ಷೀರಾಭಿಷೇಕ ದಿಂದ ಕುಜ ದೋಷ ನಿವಾರಣೆ.

…..ಕೆ. ರಮೇಶನ್ ಜ್ಯೋತಿಷ್ಯರು ಮೈಸೂರು,9740662363


Share