ಸಂಪಾದಕೀಯ : ಡಾ.ಮಂಜುನಾಥ್ ಎಂದೂ ದೇವೆಗೌಡರ ಅಳಿಯ ಎಂದು ಪ್ರಖ್ಯಾತರಾದವರಲ್ಲ

107
Share

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲಾ ಪಕ್ಷಗಳು ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡುತ್ತಿದೆ. ನಿನ್ನೆ ಬಿಜೆಪಿ ಪಕ್ಷವು ಡಾಕ್ಟರ್ ಮಂಜುನಾಥ್ ರವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಆರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅನೇಕ ಮುಖಂಡರುಗಳು ಸಾಲು ಸಾಲಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರಮುಖವಾಗಿ ಬಹುತೇಕರು ದೇವೆಗೌಡರ ಕುಟುಂಬ ರಾಜಕಾರಣ ಅಳಿಯನ ತನಕ ಬಂದಿದೆ ಎಂದು ವ್ಯಂಗ್ಯ ಆಡುತ್ತಿದ್ದಾರೆ.
ಆದರೆ ಅವರು ಸ್ವಲ್ಪವಾದರೂ ಡಾ. ಮಂಜುನಾಥ್ ರವರ ಹಿನ್ನೆಲೆಯನ್ನು ತಿಳಿದುಕೊಂಡು ಮಾತನಾಡಬೇಕು. ಅವರಿಗೆ ತಿಳಿದಿಲ್ಲ ಎಂದಲ್ಲ. ಏನಾದರು ಹೇಳಬೇಕೆಂದು ಹೇಳುತ್ತಿರುವಂತಿದೆ ಈ ರೀತಿಯ ಹೇಳಿಕೆಗಳು.
ಡಾ.ಮಂಜುನಾಥ್ ರವರು ಎಂದಿಗೂ ದೇವೆಗೌಡರ ಅಳಿಯ ಎಂದು ವೈದ್ಯ ವೃತ್ತಿಯಲ್ಲಿ ಪ್ರಖ್ಯಾತರಾದವರಲ್ಲ. ತಮ್ಮ ವೃತ್ತಿ ನಿಷ್ಠೆ ಹಾಗೂ ಸೇವಾ ಮನೋಭಾವದಿಂದ ಬೆಳೆದು ಬಂದಿರುವವರು. ಅವರಿಗೆ ಅವರದೇ ಆದ ಸ್ವವ್ಯಕ್ತಿತ್ವ ಹೊಂದಿರುವವರು ಎನ್ನುವುದು ಯಾರು ಮರೆಯುವಂತಹ ವಿಷಯವಲ್ಲ. ರಾಜಕೀಯ ಮಾಡುವ ಕಡೆ ಮಾಡಲಿ. ಆದರೆ ಅದು ಗೌರವ ಯುತವಾಗಿರ ಬೇಕು. ಇಲ್ಲದಿದ್ದಲ್ಲಿ ಅದು ಖಂಡಿತವಾಗಿ ತಿರುಗು ಬಾಣವಾಗುವ ಸಾದ್ಯತೆಯನ್ನು ಅಲ್ಲಗಳಿಯಲಾಗುವುದಿಲ್ಲ.


Share