ಸಚಿವ ಸ್ಥಾನದಿಂದ ವಜಾ ಗೊಳಿಸಲು ಆಗ್ರಹಿಸಿ ಪ್ರತಿಭಟನೆ

149
Share

*ಸಚಿವ ಸ್ಥಾನದಿಂದ ವಜಾ ಗೊಳಿಸಲು ಒತ್ತಾಯ*

ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ಕರ್ನಾಟಕ ರಾಜ್ಯ ಸಚಿವರಾದ ಶಿವರಾಜ್ ತಂಗಡಿಗೆ ರವರು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರಿಗೆ ಅವಹೇಳನಕಾರಿಯಾಗಿ ನಿಂದಿಸಿದ ವಿರುದ್ಧವಾಗಿ
ಮೈಸೂರಿನ ಜಿಲ್ಲಾ ಪಂಚಾಯತ್ ಎದುರು ಶಿವರಾಜ್ ತಂಗಡಿಗೆ ಧಿಕ್ಕಾರ ಕೂಗುವ ಮುಖಾಂತರ ಅವರನ್ನು ಸರ್ಕಾರದಿಂದ ವಜಾ ಗೊಳಿಸುವಂತೆ ಪ್ರತಿಭಟಿಸಲಾಯಿತು.

ನಂತರ ಯುವಮೊರ್ಚಾ ನಗರ ಅಧ್ಯಕ್ಷರಾದ ರಾಕೇಶ್ ಗೌಡ ಮಾತನಾಡಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿಯವರು ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಯುವಕರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ ಹಾಗೂ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಈ ಕೂಡಲೇ ತಂಗಡಗಿಯವರನ್ನು ಸಚಿವ ಸಂಪುಟದಿಂದ ಕೈ ಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು..

ಇದೇ ಸಂದರ್ಭದಲ್ಲಿ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ಕೇಬಲ್ ಮಹೇಶ್, ಬಿ ಎಂ ರಘು, ನಗರ ಉಪಾಧ್ಯಕ್ಷರುಗಳಾದ , ಜೋಗಿ ಮಂಜು,ರುದ್ರ ಮೂರ್ತಿ, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ದಿನೇಶ್ ಗೌಡ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಿ ಲೋಹಿತ್, ಸಚಿನ್, ಮಂಡಲ ಯುವ ಮೋರ್ಚಾ ಅಧ್ಯಕ್ಷರುಗಳಾದ ಅರ್ಜುನ್, ನವೀನ್ ರಾಜ್, ಮಧು ಸೋಮಶೇಖರ್, ನಗರ ಯುವ ಮೋರ್ಚಾ ಪದಾಧಿಕಾರಿಗಳಾದ ಪುನೀತ್, ಸಂತೋಷ್, ಗಿರೀಶ್, ಶಿವಕುಮಾರ್, ಕೀರ್ತಿ ಧನರಾಜ್, ಕಿರಣ್, ದರ್ಶನ್ ಯದುರಾಜ್, ಅಭಿಲಾಶ್ ಉಮೇಶ್, ಹಾಗೂ ಮಧು ಅಕ್ಷಯ್, ನಿಖಿಲ್, ಯೋಗೇಶ್, ನವೀನ್ ಶೆಟ್ಟಿ, ಶಿವಕುಮಾರ್, ವೆಂಕಟೇಶ್ ದಾಸ್, ಪ್ರಭು ,ಮೋಟರಾಜು, ಅಭಿಷೇಕ್, ಚಂದನ್ ಗೌಡ ಮುಂತಾದವರು ಉಪಸ್ಥಿತರಿದ್ದರು.

 


Share