08/03/2022 ರ ಸರ್ಕಾರಿ ಅರ್ಜಿ ಆಹ್ವಾನ

221
Share

ಪ್ರವೇಶಾರ್ತಿಗಳಿಗೆ : ಅರ್ಜಿ ಆಹ್ವಾನ

ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು
೨೦೨೧-೨೨ ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯಲ್ಲಿ ಪ್ರಥಮ, ವರ್ಷದÀ ಬಿ.ಎ.,
ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎ., ಬಿ.ಲಿಬ್.ಐ.ಎ.ಸ್ಸಿ., ಎಂ.ಎ.,
ಎಂ.ಕಾA., ಎಂ.ಎಸ್ಸಿ., ಎಂ.ಬಿ.ಎ., ಎಂ.ಲಿಬ್.ಐ.ಎಸ್ಸಿ., ಪಿ.ಜಿ. ಡಿಪ್ಲೊಮಾ,
ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಜಿ
ಆಹ್ವಾನಿಸಲಾಗಿದೆ.

ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಡಿಫೆನ್ಸ್
ಹಾಗೂ ಎಕ್ಸ್ ಸರ್ವಿಸ್‌ಮನ್ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.೧೫% ರಷ್ಟು
ಶುಲ್ಕ ರಿಯಾಯಿತಿ ಇರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಅರ್ಹ
ವಿದ್ಯಾರ್ಥಿಗಳಿಗೆ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ
ಷರತ್ತಿಗೊಳಪಟ್ಟು “ಶುಲ್ಕ ವಿನಾಯಿತಿ ಯೋಜನೆಯಡಿ” ಪ್ರವೇಶಾತಿ ಪಡೆಯಬಹುದಾಗಿದೆ.
ಕೋವಿಡ್-೨೦೧೯ ಸಾಂಕ್ರಾಮಿಕ ರೋಗದಿಂದ ಮೃತರಾದ ಆ ತಂದೆ/ತಾಯಿಯ ಮಕ್ಕಳಿಗೆ ಅವರು
ಅರ್ಹತೆ ಹೊಂದಿ ಪ್ರವೇಶಾತಿ ಬಯಸುವ ಶಿಕ್ಷಣಕ್ರಮಗಳ ಪ್ರವೇಶಾತಿ ಶುಲ್ಕದಲ್ಲಿ ಶೇ. ೧೦೦
ರಷ್ಟು ರಿಯಾಯಿತಿ ಇರುತ್ತದೆ

ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್
ತಿತಿತಿ.ಞsoumಥಿsuಡಿu.ಚಿಛಿ.iಟಿ ಮುಖಾಂತರ ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿ,
ಅಗತ್ಯ ದಾಖಲೆಗಳೊಂದಿಗೆ ಶಾಂತಿನಿಕೇತನ ಶಿಕ್ಷಣ ಸಂಸ್ಥೆಗಳ ಕಟ್ಟಡದಲ್ಲಿ
ಕಾರ್ಯನಿರ್ವಹಿಸುತ್ತಿರುವ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಮಾರ್ಚ್ ೩೧ ರೂಳಗಾಗಿ
ಸಲ್ಲಿಸುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಿರ್ದೇಶಕಿ
ನಂದಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ೯೯೬೪೪೯೫೯೩೬, ೮೮೬೧೭೩೨೪೮೭, ೮೬೬೦೪೬೦೨೬೧, ೯೭೪೩೧೮೪೮೪೮
ಹಾಗೂ ೯೯೦೦೩೫೬೨೨೬ ಅನ್ನು ಸಂಪರ್ಕಿಸಬಹುದಾಗಿದೆ.


Share