ಭಾವನೆಗಳ ಬುಟ್ಟಿ : ಕನ್ನಡ ಬಿಗ್ ಬಾಸ್ – ಸಾಮಾನ್ಯರ ಮುಂದೆ ಪರದಾಡುತ್ತಿರುವ ಸೆಲಿಬ್ರಿಟಿಗಳು

145
Share

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಅಂತಿಮ ಘಟ್ಟ ತಲುಪಿದೆ. ಈಗ ಅಂತಿಮವಾಗಿ ಆರು ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ನಾಲ್ಕು ಜನ ಸೆಲೆಬ್ರಿಟಿಗಳು, ಇಬ್ಬರು ಸಾಮಾನ್ಯರು. ಆದರೆ ಎಷ್ಟೋ ದಿನ ಪ್ರತಾಪ್ ಹಾಗೂ ವರ್ತೂರ್ ಸಂತೋಷ್ ಅವರು ತಾವು ಇವರ ಗುಂಪಿಗೆ ಸೇರಿಲ್ಲ ಎಂದುಕೊಂಡೆ ಫಿನಾಲೆ ತಲುಪಿದ್ದಾರೆ . ಈಗ ನಾಲ್ಕು ಜನ ಸೆಲೆಬ್ರಿಟಿಗಳು ಇವರೊಂದಿಗೆ ಸ್ವಲ್ಪ ಹೆಚ್ಚಾಗಿ ಸ್ನೇಹವನ್ನು ತೋರಿಸುತ್ತಿದ್ದಾರೆ ವಿನಯ್ ಪ್ರತಾಪನಿಗೆ ಮಗನಂತೆ , ಎಂದು ತುಕಾಲಿ ಸಂತೋಷ ಪ್ರತಾಪನಿಗೆ ತಮ್ಮನಂತೆ ಎಂದು ಎಲ್ಲರೂ ಸೇರಿ ಹಳ್ಳಿಕಾರ್ ವರ್ತೂರ್ ಸಂತೋಷ್ಗೆ ಜೈಕಾರ ಕೂಗಿದ್ದು, ಸ್ವಲ್ಪ ದಿನದಿಂದಲೇ ಸಂಗೀತ ಹೆಚ್ಚಾಗೇ ಪ್ರತಾಪನಿಗೆ ವಿಶ್ವಾಸ ತೋರುತ್ತಿರುವುದು ಇದೆಲ್ಲವೂ ನೋಡಿದರೆ ಇಷ್ಟು ದಿನ ಒಬ್ಬರ ಮೇಲೆ ಒಬ್ಬರು ದ್ವೇಷ ಸಾಧಿಸುತ್ತಿದ್ದು ಇದೀಗ ಈ ಬದಲಾವಣೆಗೆ ಆಗಿರುವುದು ನೋಡಿದರೆ ಇದು ನಿಜವಾದ ಬದಲಾವಣೆ ಎನ್ನಿಸುವುದಿಲ್ಲ. ಸಾಮಾನ್ಯರಾಗಿ ಅದರಲ್ಲೂ ಅಸಮರ್ತರಾಗಿ ಬಂದು ಈ ಹಂತ ತಲುಪಿರುವ ಇಬ್ಬರು ಸ್ಪರ್ಧಿಗಳಿಗೆ ಸಾರ್ವಜನಿಕರ ಬೆಂಬಲ ಹೆಚ್ಚಾಗಿವೆ ಎಂಬುದನ್ನು ಮನಗಂಡು ಅವರನ್ನು ಎದುರು ಹಾಕಿಕೊಳ್ಳುವುದು ಬೇಡವೆಂದು ಸೇಫಾಗಿ ಆಟ ಆಡಲು, ಅವರಿಬ್ಬರ ಅಭಿಮಾನಿಗಳ ಮನ ಗೆಲ್ಲುಲು ಈ ರೀತಿ ನಡೆದುಕೊಳ್ಳುತ್ತಿರುವಂತಿದೆ.
ಈ ಬಾರಿ ಬಿಗ್ ಬಾಸ್ ಕಪ್ಪು ಯಾರ ಪಾಲಾಗುತ್ತದೆಯೋ ಗೊತ್ತಿಲ್ಲ. ಒಂದು ಪ್ರತಾಪ್, ವರ್ತೂರ್ ಸಾಮಾನ್ಯರ ಗುಂಪು, ಎರೆಡು ಸಂಗೀತ ಏಕೈಕ ಮಹಿಳಾ ಸ್ಪರ್ಧಿ, ಮೂರು ವಿನಯ್, ಕಾರ್ತಿಕ್, ತುಕಾಲಿ ಸಂತೋಷ್. ಜನ ಕೈ ಹಿಡಿಯುತ್ತಾರೋ ಇನ್ನು ಒಂದೇ ದುನದಲ್ಲಿ ತಿಳಿಯುತ್ತದೆ.
ಆದರೆ ಸೆಲಿಬ್ರಿಟಿಗಳು ಮಾತ್ರ ಇನ್ನಿಬ್ಬರ ಅಭಿಮಾನಿಗಳನ್ನು ತಮ್ಮತ್ತ ಸೆಳೆಯಲು ಹರ ಸಾಹಸ ಪಡುತ್ತಿರುವುದಂತು ಎತ್ತಿ ಕಾಣುತ್ತಿದೆ.
ಒಟ್ಟಿನಲ್ಲಿ ಸಾಮಾನ್ಯರ ಮುಂದೆ ಸೆಲಿಬ್ರಿಟಿಗಳು ಪರದಾಡುತ್ತಿದ್ದಾರೆ ಎಂದೇ ಹೇಳಬಹುದು.

Share