ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ತಾ:ಗುಹ್ಯಸ್ಥಾನದಕುರು, ಹೊಟ್ಟೆಯ ಎಡಭಾಗದ ಮಾಂಸಗ್ರಂಥಿಗೆ ಸಂಬಂಧಿಸಿದರೋಗ, ಮೂತ್ರವ್ಯಾಧಿ, ಅತಿಸಾರ, ಹೊಟ್ಟೆ ಉಬ್ಬರ, ಕೆಮ್ಮಲು, ಶ್ವಾಸಬಾಧೆ, ವಾತದ ಊರ್ಧ್ವಗಮನ ರೋಗ, ಗುದಗುಹ್ಯರೋಗಗಳು, ತಲೆನೋವು, ವಾಂತಿ, ಬಿಕ್ಕಳಿಕೆ, ಕತ್ತಿನಲ್ಲಿ ರಸಗ್ರಂಥಿಯು ಕಟ್ಟುವುದರಿಂದ ಆಗುವ ಉರಿತದ ಬೇನೆ, ಅಜೀರ್ತಿಬಾಧೆ, ವಾತಪಿತ್ತ ಕಫಗಳೆಂಬ ತ್ರಿದೋಷಗಳಿಂದ ಹುಟ್ಟಿದ ಜ್ವರ, ಒಂದು ದಿನದ ಶೀತ, ಉಷ್ಣರೋಗ, ಇದು ವರೆಗೂ ಹೇಳಿದ ಹಾಗೂ ಹೇಳಲ್ಪಡದ ದೋಷಗಳಿಂದ ಬರುವ ರೋಗಗಳೆಲ್ಲವೂ ಈ ಸಹಸ್ರನಾಮದ ಏಕವಾರ ಪಾರಾಯಣದಿಂದಲೇ ಶಮನಗೊಳ್ಳುತ್ತವೆ. ಈ ಸಹಸ್ರನಾಮವನ್ನು ಸ್ತ್ರೀಯರು, ಶೂದ್ರರು, ಪತಿತರು ಎಲ್ಲರೂ ಪಠಿಸಬಹುದು. ಪಠಿಸಬೇಕು. ಗುಲ್ಮಂ ಪ್ಲೀಹಾನಮಶ್ಲೀಲಂ ಎಂದು ಕೂಡಾ ಹೇಳುವವರಿದ್ದಾರೆ. ಅದು ಪಾಠಾಂತರ. ಹಾಗೆ ಹೇಳಿದ ಪಕ್ಷದಲ್ಲಿ ಅದು ಪ್ಲೀಹ ಎಂಬ ಪದಕ್ಕೆ ಅಥವಾ ಅತಿಸಾರಂ ಎಂಬ ಪದಕ್ಕೆ ವಿಶೇಷಣವಾಗುತ್ತದೆ. ವಾತಾದಿ ಗಳಿಂದ ಆರು ರೋಗಗಳು ಬರುತ್ತವೆ.